ಪ್ರತಿಕ್ಷಣವೂ ಅನಂತದಲ್ಲಿ ಲೀನವಾಗುವ
ಪುನರಾವರ್ತಿಸಲಾಗದ ಮಾತಗಳನ್ನು ಅತೀ ಎಚ್ಚರದ
ಸ್ಥಿತಿಯಲ್ಲೆ ಕೇಳಬೇಕಿದೆ ಆಗ ಏಕಾಗ್ರತೆ ಒಟ್ಟುಗೂಡುವುದನ್ನು
ನೀವು ಕಾಣುತ್ತೀರಿ ಗ್ರಹಿಕೆ ವೃದ್ಧಿಸುವುದ ಗ್ರಹಿಸುತ್ತೀರಿ
ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಆಚಾರ್ಯ
ವಾಚಸ್ಪತಿಗೆ ಕಾಲ ನೆಗೆದುದೇ ತಿಳಿಯದು
ಇಹದ ಪರಿವೆ ಉಂಟಾದರೆ ಕಣ್ಣೆದುರು ಮಂದ ಬೆಳಕಿನ ದೀಪ
ಎಣ್ಣೆ ತೀರಿಹೋಗುತ್ತಿರುವ ಅದು ಮತ್ತು ಸೌಂದರ್ಯ ಕಳೆದುಹೋಗುತ್ತಿರುವ ಭಾಮತಿ
ಶಿಲ್ಪ ಕಡೆಯುವಾಗಿನ ಜೀವಂತಿಕೆಯ ಅನುಭವ
ಪರಿಪೂರ್ಣತೆಯಾದ ತರುವಾಯದಲ್ಲಿ ಉಳಿಯುವುದೇ ಇಲ್ಲ
ಬದುಕು ಕಣಿವೆಯ ಹಾಗೆ ಅನ್ನಿಸತ್ತಲೇ ಹೋಗುತ್ತದೆ
ಪದೇ ಪದೇ ಸಾವು ಕಣ್ಮುಂದೆ ಬಂದು ಹೋದಂತೆ ಮುದ್ದಾಮು ತಂದುಕೊಳ್ಳುತ್ತೇವೆ ಶೂನ್ಯಮನಸ್ಕತೆ ಆವರಿಸಿ
ಕುರುಡರಾಗಿ ಜೀವಿಸಿದವರಿಗೆ
ಸೌಂದರ್ಯ ಏನೆಂದು ಕೇಳಿ ನೋಡಿ ಹುಡುಕುತ್ತಾರೆ ಅವರು
ಅದೇ ಹುಟ್ಟುಕುರುಡರಾದರೆ ನೇರ ಕತ್ತಲು ಅನ್ನುತ್ತಾರೆ
ಅವರು ಜೀವಂತ ಸಂವೇದನೆ ಹೊಂದಿದ್ದಾರಾದ್ದರಿಂದ ಇದು ಸಾಧ್ಯ
ತಡೆಗೋಡೆಗಳಿಲ್ಲದಿದ್ದರೆ ನಿರ್ವಾಣ ಕಾಣುತ್ತೇವೆ ಕೂಡಾ
ಬೆಳಕೆಂದೊಡನೆ ಹಲವು ಆಯಾಮಗಳು ಸಿಕ್ಕು ದಾರಿ ತಪ್ಪಿಸುತ್ತವೆ
ಕತ್ತಲೆಂದೊಡನೆ ಒಂದೇ ದಾರಿ ತೆರೆದುಕೊಳ್ಳುತ್ತದೆ ನೇರ