ಸಿಡಿಲು ಬಡಿದು ವಿಜಯಪುರದಲ್ಲಿ ಮೂವರ ಸಾವು

282

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಮೊಹಮ್ಮದ್ ಮಸೀದಿ ಟೆಕ್ಕೆ ಹತ್ತಿರ ನಡೆದಿದೆ. ಅಶೋಕ ರಾಮು ಕಾರಜೋಳ, ಭಾಸಾಬ ಕರ್ಜಗಿ, ಜಾವೀದ್ ಹದೀಲ ಜಾಲಗೇರಿ ಮೃತರು ಎಂದು ತಿಳಿದು ಬಂದಿದೆ.

ಈ ಘಟನೆಯಲ್ಲಿ ಮತ್ತೊಬ್ಬನಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು 4 ಕುರಿಗಳು ಸಹ ಸಾವನ್ನಪ್ಪಿವೆ. ಈ ಕುರಿತು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!