ಎಸಿಬಿ ದಾಳಿ: ಅಧಿಕಾರಿಗಳ ಮನೆಯಲ್ಲಿ ಕಂತೆ ಕಂತೆ ನೋಟು, ಕೆಜಿಗಟ್ಟಲ್ಲೆ ಚಿನ್ನಾಭರಣ

615

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬುಧವಾರ ಮುಂಜಾನೆ ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧ ಜಿಲ್ಲೆಗಳ ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. 15 ಅಧಿಕಾರಿಗಳ ಮನೆ ಮೇಲೆ ನಡೆಸಿದ ದಾಳಿಯಲ್ಲಿ ಕಂತೆ ಕಂತೆ ನೋಟುಗಳು, ಕೆಜಿ ಕೆಜಿ ಚಿನ್ನಾಭರಣ, ಬೆಳ್ಳಿ ಆಭರಣಗಳು ಸಿಕ್ಕಿವೆ. ಇದನ್ನು ನೋಡಿದ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಗದಗ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್ ರುದ್ರೇಶಪ್ಪರ ಶಿವಮೊಗ್ಗ ಮನೆಯಲ್ಲಿ 8 ಕೆಜಿ ಬಂಗಾರದ ಬಿಸ್ಕೆಟ್, ಒಂದೂವರೆ ಕೆಜಿ ಬಂಗಾರದ ಆಭರಣಗಳು, ಮೂರು ಕೆಜಿಗೂ ಹೆಚ್ಚು ಬೆಳ್ಳಿ ಆಭರಣಗಳು, 15 ಲಕ್ಷ ರೂಪಾಯಿ, ವಿವಿಧ ಆಸ್ತಿಯ ದಾಖಲೆಗಳು ಸಿಕ್ಕಿವೆ.

ದೊಡ್ಡಬಳ್ಳಾಪುರದ ಕಸಬಾ ಆರ್ ಐ ಆಗಿರುವ ಲಕ್ಷ್ಮಿನರಸಿಂಹ ಮನೆಯಲ್ಲಿ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಾಲ್ಕು ಅಂತಸ್ತಿನ ಕಟ್ಟಡ, ಸೈಟ್ ಗಳು, ಹೆಸರುಘಟ್ಟದಲ್ಲಿ ಆಸ್ತಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಹೀಗೆ ಉಳಿದ ಅಧಿಕಾರಿಗಳ ಮನೆಯಲ್ಲೂ ಭರ್ಜರಿ ಆಸ್ತಿ ಪಾಸ್ತಿ ಪತ್ತೆಯಾಗಿವೆ.


TAG


Leave a Reply

Your email address will not be published. Required fields are marked *

error: Content is protected !!