ರಾಯಚೂರು: ಗರ್ಭಿಣಿ ಪತ್ನಿಯನ್ನ ಡಾಕ್ಟರ್ ಬಳಿ ಕರೆದುಕೊಂಡು ಬೈಕ್ ನಲ್ಲಿ ಹೋಗ್ತಿದ್ದವನ ಕಟುಂಬಕ್ಕೆ ಲಾರಿಯೊಂದು ಯಮನಾಗಿ ಪರಿಣಮಿಸಿದೆ. ಇದ್ರಿಂದಾಗಿ ಮೂವರು ಸಾವನ್ನಪ್ಪಿದ ದಾರುಣ ಘಟನೆ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಬಳಿ ನಡೆದಿದೆ.
ಮಾಟೂರು ಗ್ರಾಮದ 35 ವರ್ಷದ ಪರಸಪ್ಪ, 28 ವರ್ಷದ ಕನಕಮ್ಮ ಹಾಗೂ 2 ವರ್ಷದ ಪುತ್ರಿ ನಾಗಮ್ಮ ಮೃತ ದುರ್ದೈವಿಗಳು. ಕನಕಮ್ಮ ಗರ್ಭಿಯಾಗಿದ್ರಿಂದ ತವರು ಮನೆಗೆ ಬಂದಿದ್ಳು. ಆಕೆಯ ಆರೋಗ್ಯ ತಪಾಸಣೆಗಾಗಿ ಇಲಕಲ್ ನಲ್ಲಿರುವ ಆಸ್ಪತ್ರೆಗೆ ಹೋಗುವಾಗ ಈ ದುರಂತ ಸಂಭವಿಸಿದೆ. ಲಾರಿ ಚಾಲಕ ಪರಾರಿಯಾಗಿದ್ದು, ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.