ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ, ಬೈಕ್ ಅಪಘಾತದಿಂದ ಆಸ್ಪತ್ರೆ ಸೇರಿದ್ದಾರೆ. ಈ ಘಣನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಆಪರೇಷನ್ ಮಾಡಲಾಗಿದೆ. ಹೀಗಿರುವಾಗ ಅವರ ಬ್ರೇನ್ ಇದೀಗ ಡೆಡ್ ಆಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ನಟ ಬದುಕುವ ಸಧ್ಯತೆ ತುಂಬಾ ಅಂದ್ರೆ ತುಂಬಾ ಕಡಿಮೆಯಿದೆ ಎಂದು ವೈದ್ಯರು ಹೇಳಿದ್ದಾರೆ.
ವೆಂಟಿಲೇಟರ್ ಮೂಲಕ ಅವರಿದ್ದಾರೆ. ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಬ್ರೇನ್ ಡೆಡ್ ಆಗಿರುವುದ್ರಿಂದ ವಾಪಸ್ ಸಹಜ ಸ್ಥಿತಿಗೆ ಬರುವುದು ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಕುಟುಂಬಸ್ಥರು ಅವರ ಅಂಗಾಂಗಳನ್ನ ದಾನ ನೀಡುವ ಮೂಲಕ ಹಲವರ ಜೀವಕ್ಕೆ ಆಧಾರವಾಗಲಿ ಅನ್ನೋ ನಿರ್ಧಾರಕ್ಕೆ ಬರಲಾಗಿದೆ ಎಂದು ಸಹೋದರ ಸಿದ್ದೇಶ ಹೇಳಿದ್ದಾರೆ.
ನಟ ನಿನಾಸಂ ಸತೀಶ ಸೇರಿದಂತೆ ಪ್ರತಿಯೊಬ್ಬರು ಸ್ನೇಹಿತನ ಪರಿಸ್ಥಿತಿ ನೆನೆದು ಕಣ್ಣೀರು ಹಾಕ್ತಿದ್ದಾರೆ. 8-10 ಗಂಟೆಯೊಳಗೆ ಸಹಜ ಸಾವು ಎಂದು ಘೋಷಿಸಿದ್ರೆ ಅಂಗಾಂಗ ದಾನ ಸಹ ಮಾಡಲು ಆಗುವುದಿಲ್ಲ. ಹೀಗಾಗಿ ಅಂಗಾಂಗ ದಾನಕ್ಕೆ ಬಂದಿದ್ದೇವೆ ಎಂದು ಸಹೋದರ ಹೇಳಿದ್ದಾರೆ. ಕರೋನಾ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡ್ತಿದ್ದ ವ್ಯಕ್ತಿ ಇದೀಗ ಇಲ್ಲವಾಗ್ತಿರುವುದು ನಿಜಕ್ಕೂ ದುರಂತ.