ಪ್ರಜಾಸ್ತ್ರ ಸುದ್ದಿ
ನವದೆಹಲಿ: ಬಾಲಿವುಡ್ ನಟ ಸೋನು ಸೂದ್, ಶುಕ್ರವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರನ್ನ ಭೇಟಿಯಾಗಿದ್ರು. ವಲಸೆ ಕಾರ್ಮಿಕರಿಗಾಗಿ ಆರಂಭಿಸಿದ ಆನ್ ಲೈನ್ ಜಾಬ್ ಪೋರ್ಟಲ್ ಆಗಿರುವ ‘ಪ್ರವಾಸಿ ರೋಜ್ ಗರ್’ ಕುರಿತು ಚರ್ಚಿಸಿದ್ರು.
ಲಾಕ್ ಡೌನ್ ಸಂದರ್ಭದಲ್ಲಿ ಬರೋಬ್ಬರಿ 7 ಲಕ್ಷದ 50 ಸಾವಿರ ವಲಸೆ ಕಾರ್ಮಿಕರನ್ನ ಅವರ ಊರುಗಳಿಗೆ ತೆರಳುವಂತೆ ಮಾಡಿದ್ದಾರೆ. 3 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ. ಅವರೆಲ್ಲರ ಡೇಟಾ ತಮ್ಮ ಬಳಿಯಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ನಾನು ಏನು ಮಾಡಲು ಸಾಧ್ಯ ಎಂದು ಯೋಚಿಸಿದೆ. ಆಗ ಆನ್ಲೈನ್ ಪ್ರವಾಸಿ ರೋಜ್ ಗರ್ ಯೋಚನೆ ಬಂತು ಎಂದಿದ್ದಾರೆ.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಭಾರತದಾದ್ಯಂತ ಯಾರೆಲ್ಲ ಸಹಾಯ ಕೇಳಿದ್ದಾರೋ ಅವರಿಗೆಲ್ಲ ಸಹಾಯ ಮಾಡಿದ್ದಾರೆ. ಅವರಿಗೆ ಊರು ತಲುಪಿಸಲು ಬಸ್, ಪ್ಲೇನ್ ಸೇರಿದಂತೆ ಸಕಲ ಸೌಲಭ್ಯ ನೀಡಿದ್ದಾರೆ. ಉದ್ಯೋಗದ ಜೊತೆಗೆ ಅವರಿಗೆ ವ್ಯಾಪಾರ ಮಾಡಲು ಅಂಗಡಿಗಳನ್ನ ಸಹ ಕೊಡಿಸಿದ್ದಾರೆ. ವಿದ್ಯಾರ್ಥಿಗಳಿಗೂ ಸಹಾಯ ಮಾಡಿದ್ದಾರೆ. ಈ ಮೂಲಕ ಸೋನು ಸೂದ್ ನಿಜ ಜೀವನದಲ್ಲಿ ಹೀರೋ ಆಗಿದ್ದಾರೆ.