ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಟಾಲಿವುಡ್ ಯುವ ನಟ ಸುಧೀರ್ ವರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶಾಖಪಟ್ಟಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಯುವ ನಟನ ಸಾವಿನಿಂದ ತಮಿಳು ಚಿತ್ರರಂಗಕ್ಕೆ ಶಾಕ್ ಆಗಿದೆ.
2013ರಲ್ಲಿ ಕಿಶೋರ್ ತಿರುಮಲ್ ನಿರ್ದೇಶನದ ಸೆಕಂಡ್ ಹ್ಯಾಂಡ್ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಸುಧೀರ್ ಬಂದ. ಇದು ಒಳ್ಳೆಯ ಹೆಸರು ತಂದು ಕೊಟ್ಟಿತು. ಮುಂದೆ ವರಮುಲಪುಡಿ ನಿರ್ದೇಶನದಲ್ಲಿ ಕುಂದನಪು ಬೊಮ್ಮ ಸಿನಿಮಾದಲ್ಲಿ ಹೀರೋ ಆದ. ಚಿರಂಜೀವಿ ಪುತ್ರಿ ಸುಷ್ಮಿತಾ ನಿರ್ಮಾಣದ ಶೂಟೌಟ್ ಅಟ್ ಅಲಾರ್ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾನೆ.
ನಟ ಸುಧೀರ್ ವರ್ಮಾ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಪೊಲೀಸರ ತನಿಖೆಯಿಂದ ಸತ್ಯ ಏನು ಅನ್ನೋದು ತಿಳಿದು ಬರಲಿದೆ.