ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಾಧಿಕಾ ಕುಮಾರಸ್ವಾಮಿ ಸಿಸಿಬಿ ಪೊಲೀಸರ ಮುಂದೆ ಹಾಜರಾದ್ರು. ನಟಿ ಖಾತೆಗೆ 75 ಲಕ್ಷ ರೂಪಾಯಿ ಜಮಾ ಆಗಿದೆ ಅನ್ನೋದರ ಕುರಿತು ತನಿಖೆಗಾಗಿ ಸಿಸಿಬಿ ಪೊಲೀಸರು ಕರೆದಿದ್ದು, ನಟಿ ವಿಚಾರಣೆ ಎದುರಿಸಿದ್ದಾರೆ.
ಕೆಲ ದಿನಗಳ ಹಿಂದೆ ಜ್ಯೋತಿಷಿ ಯುವರಾಜನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವನಿಂದ ರಾಧಿಕಾ ಕುಮಾರಸ್ವಾಮಿಗೆ 75 ಲಕ್ಷ ರೂಪಾಯಿ ವರ್ಗಾವಣೆಯಾಗಿತ್ತು. ಈ ಸಂಬಂಧ ನಟಿ ಹಾಗೂ ಸಹೋದರ ರವಿ ರಾಜ್ ಅವರು ಸಿಸಿಬಿ ಅಧಿಕಾರಿ ನಾಗರಾಜ ಅವರ ಎದುರು ಹಾಜರಾದ್ರು.
ನಾಟ್ಯರಾಣಿ ಶಾಂತಲಾ ಚಿತ್ರದಲ್ಲಿ ನಟಿಸುವ ಕುರಿತು 75 ಲಕ್ಷ ರೂಪಾಯಿ ಮುಂಗಡ ಹಣ ನೀಡಲಾಗಿತ್ತು. ಜ್ಯೋತಿಷಿ ಯುವರಾಜ ಖಾತೆಯಿಂದ 15 ಲಕ್ಷ ಹಾಗೂ ನಿರ್ಮಾಪಕರ ಖಾತೆಯಿಂದ 60 ಲಕ್ಷ ರೂಪಾಯಿ ವರ್ಗಾವಣೆಯಾಗಿದ್ದು, ಆದ್ರೆ ಯಾವುದೇ ಒಪ್ಪಂದ ಮಾಡಿಕೊಂಡಿರ್ಲಿಲ್ಲವೆಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. ಯುವರಾಜ ಇಂಥಾ ವ್ಯಕ್ತಿಯೆಂದು ಗೊತ್ತಿರ್ಲಿಲ್ಲ. ಅವರ ಹಣ ವಾಪಸ್ ಮಾಡಲಾಗುವುದು. ಇದನ್ನೇ ಸಿಸಿಬಿ ಅಧಿಕಾರಿಗಳ ಮುಂದೆ ಹೇಳುತ್ತೇನೆ ಎಂದು ನಟಿ ತಿಳಿಸಿದ್ದಾರೆ.