ಶಾನ್ವಿ ಬರೆದ ಬೇಸರದ ಪತ್ರದಲ್ಲೇನಿದೆ?

407

ನಟಿ ಶಾನ್ವಿ ಶ್ರೀವಾತ್ಸವ ಚಂದನವನದ ಚಂದದ ನಟಿ. ಹಲವು ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಶಾನ್ವಿ ನಟಿಸಿದ ಗೀತಾ ಮೂವಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ನಟ ಗೋಲ್ಡನ್ ಸ್ಟಾರ್ ಗಣೇಶ ಇದರಲ್ಲಿ ಆ್ಯಕ್ಟ್ ಮಾಡಿದ್ದಾರೆ. ಮೂವಿ ರಿಲೀಸ್ ಬಳಿಕ ಶಾನ್ವಿ ಬರೆದ ಬೇಸರದ ಪತ್ರ ಯಾರಿಗೆ ಅನ್ನೋದು ಪ್ರಶ್ನೆಯಾಗಿದೆ.

ಒಳ್ಳೆಯ ಚಿತ್ರಗಳನ್ನ ಯಾರೂ ಪ್ರೀತಿಯಿಂದ ನೋಡುವುದಿಲ್ಲ. ಪ್ರೇಕ್ಷಕರಿಗಾಗಿ ಯಾರೂ ಒಳ್ಳೆಯ ಸಿನ್ಮಾ ಮಾಡಬೇಕೆಂದು ಬಯಸುವುದಿಲ್ಲ ಅಂತಾ ಹೇಳಿದ್ದಾರೆ. ಸ್ಪೋರ್ಟ್ಸ್ ರೀತಿ ಸೋಲು ಗೆಲುವು ಸಹಜ. ಆದ್ರೆ, ಕೊನೆಯತನಕ ಪ್ರಾಮಾಣಿಕ ಪ್ರಯತ್ನ ಪಡಬೇಕು ಅಂದಿದ್ದಾರೆ. ಸ್ಕ್ರೀಪ್ಟ್ ಹೇಗೆ ಇರುತ್ತೋ ಸ್ಕ್ರೀನ್ ಮೇಲೆ ಹಾಗೇ ಬರಬೇಕು. ಏನಾದ್ರೂ ಬದಲಾವಣೆಯಿದ್ರೆ ತಿಳಿಸಬೇಕು ಅಂತಾ ಬೇಸರದಿಂದ ಹೇಳಿದ್ದಾರೆ.

ಹೀಗೆ ನಟಿ ಶಾನ್ವಿ ಬರೆದ ಪತ್ರ ಯಾರಿಗೆ ಅನ್ನೋ ಪ್ರಶ್ನೆ ಮೂಡಿದೆ. ಗೀತಾ ಮೂವಿ ರಿಲೀಸ್ ಆಗಿದೆ. ರಕ್ಷಿತ ಶೆಟ್ಟಿ ಜೊತೆ ನಟಿಸಿರುವ ಅವನೇ ಶ್ರೀಮನ್ನಾರಾಯಣ ಮೂವಿ ರಿಲೀಸ್ ಆಗಬೇಕಿದೆ. ಹೀಗಾಗಿ ಹಲವು ಪ್ರಶ್ನೆಗಳು ಮೂಡಿವೆ.




Leave a Reply

Your email address will not be published. Required fields are marked *

error: Content is protected !!