ಅಗ್ನಿಕೊಂಡ ಹಾಯುವಾಗ ನೂಕುನುಗ್ಗಲು, 30 ಜನರಿಗೆ ಗಾಯ

77

ಪ್ರಜಾಸ್ತ್ರ ಸುದ್ದಿ

ತುಮಕೂರು: ಅಗ್ನಿಕೊಂಡ ಹಾಯುವಾಗ ನೂಕುನುಗ್ಗಲು ಉಂಟಾಗಿ 30ಕ್ಕೂ ಹೆಚ್ಚು ಭಕ್ತರು ಕುಂಡದಲ್ಲಿ ಬಿದ್ದು ಗಾಯಗೊಂಡ ಘಟನೆ ತುರುವೇಕೆರೆ ತಾಲೂಕಿನ ಮಾವಿನಕೆರೆಯಲ್ಲಿ ನಡೆದಿದೆ.

ದೇವರ ಜಾತ್ರೆ ಹಿನ್ನೆಲೆಯಲ್ಲಿ ಅಗ್ನಿಕೊಂಡ ಸಿದ್ಧಪಡಿಸಲಾಗಿದೆ. ಕೊಂಡ ಹಾಯುವಾಗ ಗದ್ದಲವಾಗಿ ಭಕ್ತರು ಅದರಲ್ಲಿ ಬಿದ್ದಿದ್ದಾರೆ. ಇದರಿಂದಾಗಿ ಸಾಕಷ್ಟು ಜನರು ಮೈ, ಕೈ ಸುಟ್ಟುಕೊಂಡಿದ್ದಾರೆ. ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಆಗಿಲ್ಲ.




Leave a Reply

Your email address will not be published. Required fields are marked *

error: Content is protected !!