ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಗಣಿಹಾರ ಗ್ರಾಮದಲ್ಲಿ ಮನೆಯ ಮುಂದಿನ ಜಾಗದ ವಿಚಾರವಾಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಶರಣಮ್ಮ ಯಮನಪ್ಪ ಬಂದಾಳ ಹಲ್ಲೆಗೊಳಗಾದ ಮಹಿಳೆಯಾಗಿದ್ದಾರೆ.
ಸೆಪ್ಟೆಂಬರ್ 14ರಂದು ಬೆಳಗ್ಗೆ ಸುಮಾರು 6ಗಂಟೆಯ ಸಮಯದಲ್ಲಿ ಕಸ ಗೂಡಿಸುವ ಸಂದರ್ಭದಲ್ಲಿ ಬಂದು ಜಗಳ ತೆಗೆದಿದ್ದಾರೆ. ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಹೇಳಿ, ಶಹಾಜಾಜಬಿ ಗೋಟ್ಯಾಳ, ಬಸೀರಾ ಗೋಟ್ಯಾಳ, ಕರೀಷ್ಮಾ ಗೋಟ್ಯಾಳ, ಜಭಿನಾ ಮೋಮಿನ ಹಾಗೂ ಅಸ್ಲಂ ಗೋಟ್ಯಾಳ ಎಂಬುವರ ವಿರುದ್ಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.