ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ವಿಜಯಪುರ: ಜಿಲ್ಲೆಯ ಆಲಮೇಲ ಪಟ್ಟಣದ ಬೆರಗು ಪ್ರಕಾಶನ ಸಂಸ್ಥೆಯು ದಿ.ಯಮನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ನೀಡುವ 2021ನೇ ಸಾಲಿನ ರಾಜ್ಯ ಮಟ್ಟದ ಬೆರಗು ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿಗಳನ್ನು ಆಹ್ವಾನಿಸಿದೆ.
ಪ್ರಕಟಣೆಗೆ ಸಿದ್ಧವಾದ ಸಾಹಿತ್ಯದ ಯಾವುದೇ ಪ್ರಕಾರದ ಹಸ್ತಪ್ರತಿಗಳನ್ನ ಕಳಿಸಬಹುದು. 40 ವರ್ಷದೊಳಗಿನವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಶಸ್ತಿಗೆ ಆಯ್ಕೆಯಾದ ಹಸ್ತಪ್ರತಿಯನ್ನು ಪ್ರಕಾಶನವು ಪ್ರಕಟಿಸಿ, 5000 ರೂಪಾಯಿ ಗೌರವ ಸಂಭಾವನೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತೆ ಎಂದು, ಸಂಚಾಲಕಿ ವಿಜಯಲಕ್ಷ್ಮಿ ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಸ್ತಪ್ರತಿಯನ್ನು 1/8 ಸೈಜ್ ನಲ್ಲಿ ಡಿಟಿಪಿ ಮಾಡಿರಬೇಕು, ಕನಿಷ್ಠ 60 ಪುಟಗಳನ್ನೊಳಗೊಂಡಿರತಕ್ಕದ್ದು. ಜುಲೈ 25, 2021ರೊಳಗಾಗಿ ಹಸ್ತಪ್ರತಿಯನ್ನ ಕಳಿಸಬೇಕು. ತಲುಪಿಸಬೇಕಾದ ವಿಳಾಸ: ಸಂಚಾಲಕರು, ಬೆರಗು ಪ್ರಕಾಶನ, ಕಡಣಿ-586202 ತಾಲೂಕು: ಆಲಮೇಲ, ಜಿಲ್ಲೆ: ವಿಜಯಪುರ. ಹೆಚ್ಚಿನ ಮಾಹಿತಿಗೆ 8970454639 ಸಂಪರ್ಕಿಸಲು ತಿಳಿಸಲಾಗಿದೆ. ಆಗಷ್ಟ್ 30ರಂದು ಡಾ.ಎಂ.ಎಂ.ಕಲಬುರ್ಗಿ ಅವರ ಪುಣ್ಯಸ್ಮರಣೆಯಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.