ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಸಂಜೆ ಕೋಟೆನಾಡು ಪ್ರವೇಶಿಸಲಿದೆ. ರಾಜ್ಯದಲ್ಲಿ ಇಂದು 11ನೇ ದಿನಕ್ಕೆ ಈ ಪಾದಯಾತ್ರೆ ಕಾಲಿಟ್ಟಿದೆ. ತುಮಕೂರಿನ ಹುಳಿಯಾರ ರಸ್ತೆಯ ಮೂಲಕ ಚಿತ್ರದುರ್ಗದ ಹಿರಿಯೂರಿನಿಂದ ಪ್ರವೇಶ ಮಾಡಲಾಗುತ್ತಿದೆ.
ಐದು ದಿನಗಳ ಕಾಲ ಜಿಲ್ಲೆಯಲ್ಲಿ ಪಾದಯಾತ್ರೆ ಸಾಗಲಿದೆ. ಹಿರಯೂರು, ಚಳ್ಳಕೆರೆ, ಮೊಳಕಾಲ್ಮೂರು ಮಾರ್ಗದ ಮೂಲಕ ಯಾತ್ರೆ ಸಾಗಲಿದೆ. ಅಕ್ಟೋಬರ್ 14ಕ್ಕೆ ರಾಜ್ಯದಲ್ಲಿನ ಪಾದಯಾತ್ರೆಗೆ ತೆರೆ ಬೀಳಲಿದೆ. ದಾರಿಯುದ್ದಕ್ಕೂ ಅದೆ ಉತ್ಸಾಹ, ಹುಮ್ಮಸ್ಸಿನ ಮೂಲಕ ಹೆಜ್ಜೆ ಹಾಕಲಾಗುತ್ತಿದೆ. 150 ದಿನಗಳ ಈ ಯಾತ್ರೆಗೆ ಬಹುದೊಡ್ಡ ಬೆಂಬಲ ವ್ಯಕ್ತವಾಗಿದೆ.