ಪ್ರಜಾಸ್ತ್ರ ಸುದ್ದಿ
ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಭಾನುವಾರ ಸಂಜೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಸಿಂದಗಿ-ವಿಜಯಪುರ ರಸ್ತೆಯಲ್ಲಿ ಡಿವೈಡರ್ ಗೆ ಗುದ್ದಿದ ಪರಿಣಾಮ 18 ವರ್ಷದ ಶಿವಾನಂದ ಪರಶುರಾಮ ಯಾಳವಾರ ಅನ್ನೋ ಯುವಕ ಸಾವನ್ನಪ್ಪಿದ್ದಾನೆ.
ವೇಗವಾಗಿ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್ ಗೆ ಗುದ್ದಿದೆ. ಇದ್ರಿಂದಾಗಿ ಚಿಕ್ಕಸಿಂದಗಿ ಗ್ರಾಮದ ವಿದ್ಯಾರ್ಥಿ ಶಿವಾನಂದ ಯಾಳವಾರ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇನ್ನು ಬೈಕ್ ಮೇಲೆ ಮೂವರು ಇದ್ದರು ಎಂದು ಕೆಲವರು ಹೇಳಿದ್ರೆ, ಇಬ್ಬರು ಇದ್ದರು ಎಂದು ಮತ್ತೆ ಕೆಲವರು ಹೇಳ್ತಿದ್ದು ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ.
ಮೃತದೇಹವನ್ನ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.