ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಬೆಂಗಳೂರು: ಶಾ.ಬಾಲೂರಾವ್ ಯುವ ಬರಹಗಾರ ಪ್ರಶಸ್ತಿ ಹಾಗೂ ಶಾ.ಬಾಲೂರಾವ್ ಅನುವಾದ ಪ್ರಶಸ್ತಿಗೆ ಯುವ ಬರಹಗಾರರ ಕೃತಿಗಳನ್ನ ಆಹ್ವಾನಿಸಲಾಗಿದೆ. 35 ವರ್ಷದೊಳಗಿನ ಲೇಖಕರು ಸಾಹಿತ್ಯ ಯಾವುದೇ ಪ್ರಕಾರದ ಕೃತಿ ಹಾಗೂ ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಗಳನ್ನ ಕಳುಹಿಸಬಹುದು ಎಂದು ಬಿಎಂಶ್ರೀ ಪ್ರತಿಷ್ಠಾನ ತಿಳಿಸಿದೆ.
ಜುಲೈ 26ರೊಳಗೆ 3 ಕೃತಿಗಳನ್ನ ಕಳುಹಿಸಬೇಕು. ಪ್ರಶಸ್ತಿಗೆ 25 ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆ ನೀಡಲಾಗುವುದು. ವಿಳಾಸ: ಗೌರವ ಕಾರ್ಯದರ್ಶಿ, ಬಿಎಂಶ್ರೀ ಪ್ರತಿಷ್ಠಾನ, ಎನ್.ಆರ್ ಕಾಲೊನಿ, ಬೆಂಗಳೂರು. ಫೋನ್ ನಂಬರ್ 080-26615877ಗೆ ಸಂಪರ್ಕಿಸಬಹುದು.