ಪ್ರಜಾಸ್ತ್ರ ಸುದ್ದಿ
ಇಂದೋರ್: ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ವೇಳೆ ಬಾಂಬ್ ಎಸೆಯುವ ಬೆದರಿಕೆಯೊಂದು ಬಂದಿದೆ. ಈ ಯಾತ್ರೆ ಇದೀಗ ಮಧ್ಯಪ್ರದೇಶ ಪ್ರವೇಶಿಸಿದೆ.
ವಾಯನಾಡ್ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಬಾಂಬ್ ಸ್ಫೋಟದ ಪತ್ರವೆಂದು ಹೇಳಲಾಗಿದೆ. ಸ್ವೀಟ್ ಅಂಗಡಿಯೊಂದರ ಮುಂದೆ ಶುಕ್ರವಾರ ಅಪರಚಿತ ವ್ಯಕ್ತಿ ಪತ್ರ ಇಟ್ಟು ಹೋಗಿದ್ದಾನೆ. ಐಪಿಸಿ ಸೆಕ್ಷನ್ 507ರ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಸಿಸಿಟಿವಿ ಆಧಾರದ ಮೇಲೆ ಅಪರಿಚಿತನ ಪತ್ತೆಗೆ ಪೊಲೀಸರು ತನಿಖೆ ನಡೆಸಿದ್ದಾರೆ.