ಪ್ರಜಾಸ್ತ್ರ ಸುದ್ದಿ
ಮಂಡ್ಯ: ಕೆಎಸ್ಆರ್ ಟಿಸಿ ಬಸ್ ಚಕ್ರಕ್ಕೆ ಸಿಲುಕಿ 14 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ನಂಜನಗೂಡು ಬಸ್ ನಿಲ್ದಾಣದಲ್ಲಿ ನಡೆದಿದೆ. ನಂಜನಪುರದ ಪ್ರಕಾಶ್ ಅವರ ಮಗ ಪ್ರಜ್ವಲ್(14) ಮೃತ ಬಾಲಕನಾಗಿದ್ದಾನೆ.
ತಂದೆಯೊಂದಿಗೆ ಊರಿಗೆ ಹೋಗಲು ಬಸ್ ಹತ್ತುತ್ತಿದ್ದಾಗ ನಡೆದ ದುರಂತ ಸಂಭವಿಸಿದೆ. ಬಾಲಕ ಪ್ರಜ್ವಲ್ ಮುಂಭಾಗದ ಬಾಗಿಲಿನಿಂದ ಹತ್ತಲು ಹೋದಾಗ, ಹಿಂಭಾಗದಿಂದ ಹತ್ತು ಅನ್ನೋ ಧ್ವನಿ ಕೇಳಿದೆಯಂತೆ. ಅಲ್ಲಿಂದ ಹತ್ತುವಾಗ ಬಸ್ ಮುಂದಕ್ಕೆ ಹೋಗಿದೆ. ಆಗ ಬಾಲಕ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
ಬಾಲಕ ಮೃತದೇಹ ತೆಗೆದುಕೊಂಡು ಹೋಗಲು ಆಂಬ್ಯುಲೆನ್ಸ್ ಸಹ ಬಾರದೆ ದುಃಖತಪ್ತ ತಂದೆ ಪಡಬಾರದ ಪಾಡು ಪಟ್ಟಿದ್ದಾರೆ. ಸಂಚಾರ ಠಾಣೆ ಎಸ್ಐ ಅವರು ಆಟೋ ಮೂಲಕ ಮೃತದೇಹ ರವಾನಿಸಿದ್ದಾರೆ.