ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ: ಕಲ್ಲಿಗೆ ಡಿಕ್ಕಿಯಾಗಿ ನಿಯಂತ್ರಣ ತಪ್ಪಿ ಕಾರೊಂದು ಇಲ್ಲಿನ ಘಟಪ್ರಭಾ ನದಿ ಕಾಲುವೆಗೆ ಬಿದ್ದಿದೆ. ಮುಧೋಳ ತಾಲೂಕಿನ ಹಲಕಿಕೆ ಗ್ರಾಮದ ಹತ್ತಿರ ತಡರಾತ್ರಿ ಈ ಘಟನೆ ನಡೆದಿದ್ದು, ಇದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ.
ಮಹಾದೇವಗೌಡ(27), ಸುನಿಲ್(24), ಏರಿತಾತ(26) ಹಾಗೂ ವಿಜಯ್(26) ಮೃತ ದುರ್ದೈವಿಗಳು. ಇನ್ನಿಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಧೋಳದಿಂದ ರಾಮದುರ್ಗಕ್ಕೆ ತೆರಳಿದ್ದಾಘ ಈ ದುರಂತ ಸಂಭವಿಸಿದೆ. ಲೋಕಾಪುರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.