ಬಾಲಕನ ಹುಚ್ಚಾಟಕ್ಕೆ ಒಂದೇ ಕುಟುಂಬದ ಮೂವರು ಬಲಿ

253

ಪ್ರಜಾಸ್ತ್ರ ಸುದ್ದಿ

ಮೈಸೂರು: ಕಳೆದ ಗುರುವಾರ ರಾತ್ರಿ ಕಾರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದರು. ಒಂದೇ ಕುಟುಂಬದ ಮೂವರ ಸಾವಿಗೆ ಕಾರಣವಾಗಿರೋದು ಅಪ್ರಾಪ್ತ ಬಾಲಕನ ಹುಚ್ಚಾಟ ಅನ್ನೋದು ತಿಳಿದು ಬಂದಿದೆ.

9ನೇ ತರಗತಿ ವಿದ್ಯಾರ್ಥಿಯೊಬ್ಬ ರಾತ್ರಿ ವೇಳೆ ಮುಖ್ಯರಸ್ತೆಯಲ್ಲಿ ಕಾರ್ ಓಡಿಸುವ ಹುಚ್ಚು ಸಹಾಸಕ್ಕೆ ಕೈಹಾಕಿದ್ದಾನೆ. ಸರಿಯಾಗಿ ಕಾರು ಓಡಿಸಲು ಬರದ ವಿದ್ಯಾರ್ಥಿಗೆ ನಿಯಂತ್ರಣ ತಪ್ಪಿದೆ. ಆಗ ಮೈಸೂರು-ಬೆಂಗಳೂರು ರಸ್ತೆಯ ದಂಡಿ ಮಾರಮ್ಮನ ದೇವಸ್ಥಾನದ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು, ಮತ್ತೊಂದು ನುಗ್ಗಿ ಎದುರಿಗೆ ಬರ್ತಿದ್ದ ಬೈಕ್ ಗೆ ಗುದ್ದಿದೆ.

ಕಾರು ಗುದ್ದಿದ ರಭಸಕ್ಕೆ ಅನ್ಯಾಯವಾಗಿ 3 ಜೀವಗಳು ಬಲಿಯಾಗಿವೆ. ರಮೇಶ(41), ಪತ್ನಿ ಉಷಾ(36) ಹಾಗೂ ಮಗ ಮನೀಶ(5) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಮಗ ಸಿದ್ಧಾರ್ಥ(3) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಏನೂ ಅರಿಯದ ಕಂದ ಅನಾಥವಾಗಿದೆ.




Leave a Reply

Your email address will not be published. Required fields are marked *

error: Content is protected !!