ಮೈಸೂರು: ಹುಣಸೂರಿನ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಮಾರ್ಚ್ 3 ರಂದು ಪತ್ನಿಯನ್ನ ನೇಣು ಬೀಗಿದು ಕೊಲೆ ಮಾಡಲು ಯತ್ನಿಸಿದ್ದ ಅನ್ನೋ ಆರೋಪವಿದೆ. ಇದರ ನಡುವೆ 41 ವರ್ಷದ ನಾಗವೇಣಿ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ನಾಗವೇಣಿ ಪತಿ ವೆಂಕಟಪ್ಪ ಕಿರುಕುಳದಿಂದ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ದೇ, ಮಾರ್ಚ್ 3ರಂದು ನೇಣು ಬೀಗಿದು ಹತ್ಯೆ ಮಾಡಲು ಯತ್ನಿಸಿದ್ದ ಎಂದು ಆರೋಪಿಸಿದ್ರು. ಈ ಸಂಬಂಧ ನಾಗವೇಣಿಯನ್ನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಾವನ್ನಪ್ಪಿದ್ದಾರೆ.
ತಿ.ನರಸೀಪುರ ತಾಲೂಕಿನಲ್ಲಿ ವೆಂಕಟಪ್ಪ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಯಾಗಿದ್ದ. 1997ರಲ್ಲಿ ನಾಗವೇಣಿಯನ್ನ ಮದುವೆಯಾಗಿದ್ದ. ಈ ದಂಪತಿ ಸೋಮನಾಥಪುರದಲ್ಲಿ ವಾಸವಾಗಿದ್ರು. ಈ ಪ್ರಕರಣ ಸಂಬಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.