ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ತೇರದಾಳ ಮತಕ್ಷೇತ್ರಕ್ಕೆ ಶಾಸಕ ಸಿದ್ದು ಸವದಿ ಅಭ್ಯರ್ಥಿ ಎಂದು ಮಂಗಳವಾರ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ, ಇಂದು ಅದು ಬಾಯಿ ತಪ್ಪಿನಿಂದ ಹೇಳಿದ ಮಾತಾಗಿದೆ. ಅಭ್ಯರ್ಥಿ ಘೋಷಣೆ ಮಾಡುವ ಅಧಿಕಾರ ನಮಗಿಲ್ಲ ಎಂದರು.
ಬಿವಿವಿ ಸಂಘದ ವಸತಿ ಗೃಹದಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಅಧಿಕಾರ ಕೇಂದ್ರ ಚುನಾವಣಾ ಸಮಿತಿಗೆ ಇದೆ. ಸಿದ್ದು ಸವದಿ ಅಭ್ಯರ್ಥಿ ಎಂದು ಹೇಳಿರುವುದು ಬಾಯಿ ತಪ್ಪಿನಿಂದ ಅಂತಾ ಹೇಳಿದರು. ಜಿಲ್ಲೆಯಲ್ಲಿ ಪಕ್ಷದಿಂದ ಉಚ್ಛಾಟಿತಗೊಂಡವರು ಪಕ್ಷಕ್ಕೆ ಮುಜುಗರ ಮಾಡುವ ಕೆಲಸ ಮಾಡುತ್ತಿರುವವರ ಕುರಿತು ಶಾಸಕ ಚರಂತಿಮಠ ಹೇಳಿರುವ ಮಾತಿಗೆ, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಶಾಸಕರನ್ನು ಕರೆದು ಇತ್ಯರ್ಥಪಡಿಸುತ್ತೇವೆ ಅಂತಾ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುತ್ತೇವೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದರು.