ಪ್ರಜಾಸ್ತ್ರ ಸುದ್ದಿ
ಸಿಂದಗಿ: ಮಕ್ಕಳ ಹಕ್ಕುಗಳ ಸಂಸತ್ತು-2022 ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದ ಪಡೆದ ತಾಲೂಕಿನ ಯಂಕಂಚಿ ಗ್ರಾಮದ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಲಕ್ಷ್ಮಿ ಮಡಿವಾಳಕರ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ.
ನವೆಂಬರ್ 14ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿಗಳೊಂದಿಗೆ ನಡೆಯುವ ವಿದ್ಯಾರ್ಥಿಗಳ ಸಂವಾದದಲ್ಲಿ ಲಕ್ಷ್ಮಿ ಮಡಿವಾಳಕರ ಭಾಗವಹಿಸಲಿದ್ದಾಳೆ. ವಿದ್ಯಾರ್ಥಿನಿ ಸಾಧನೆಗೆ ಶಾಲೆಯ ಉಪ ಪ್ರಾಚಾರ್ಯ ಎಸ್.ಎಸ್ ಜೇರಟಗಿ, ಮಾರ್ಗದರ್ಶಕ ಅರ್ಜುನ ಮಲ್ಲೇವಾಡಿ, ಹಿರಿಯ ಶಿಕ್ಷಕರಾದ ವಿ.ಎಸ್.ಪಾಟೀಲ, ಎಂ.ಎಸ್.ಕಡ್ಲೇವಾಡ, ಎಸ.ಜಿ.ಕಂಬಾರ, ಎಸ್.ಆರ್.ಪೋದ್ದಾರ, ಪರಸಪ್ಪ.ನಾಗಾವಿ, ಹೆಚ್.ಜಿ.ಬಿರಾದಾರ, ಯಲ್ಲಪ್ಪ.ಎಮ್ ಹಾಗೂ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಅಭಿನಂದಿಸಿದ್ದಾರೆ.