ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಚಿತ್ರದುರ್ಗದ ಆಡಳಿತಾಧಿಕಾರಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. 10 ಸಾವಿರ ಎಕರೆ ಕಾಫಿ ಎಸ್ಟೇಟ್ ಈಗ 500 ಎಕರೆಗೆ ಇಳಿದಿದೆ. ಮಠದಲ್ಲಿನ ಹೆಲಿಕಾಪ್ಟರ್ ಯಾರದ್ದು, ಆಸ್ತಿ ಬಗ್ಗೆ ಸಂಪೂರ್ಣ ತನಿಖೆಗೆ ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆಯುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಮುರುಘಾಮಠ ಪ್ರಗತಿಪರರ, ನಕ್ಸಲರ ಅಡ್ಡೆಯಾಗಿದೆ. ಪಾಕಿಸ್ತಾನದ ಮಲಾಲಗೆ ಪ್ರಶಸ್ತಿ ಕೊಟ್ಟಿದ್ದಾರೆ. ಮುರುಘಾಶ್ರೀ ಗದ್ದುಗೆಯಿಂದ ಕೆಳಗೆ ಇಳಿಯಬೇಕು. ಲಿಂಗಾಯತ ಮಠ ಎಂದರೆ ಶಿಕ್ಷಣ ಕೊಡುವುದೊಂದೆ ಆಗಿರಬೇಕು ಎಂದು ಯತ್ನಾಳ ಹೇಳಿದ್ದಾರೆ.