ಪ್ರಜಾಸ್ತ್ರ ಸುದ್ದಿ
ಚೆನ್ನೈ: ಕಲ್ಲಕುರಚಿಯಲ್ಲಿ ನಡೆದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಸಂಬಂಧ ಮತ್ತಿಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ. ಸೋಮವಾರ ಶಿಕ್ಷಕಿಯರಾದ ಹರಿಪ್ರಿಯಾ, ಕೃತಿಕಾರನ್ನು ಬಂಧಿಸಲಾಗಿದೆ. ಈ ಮೂಲಕ ಐವರು ಶಿಕ್ಷಕರ ಬಂಧನವಾಗಿದೆ. ಜೊತೆಗೆ ಅಧಿಕಾರಿಗಳ ಬಂಧನ ಸಹ ಆಗಿದೆ.
ಜುಲೈ 13ರಂದು ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೇಲ್ ನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮರಣೋತ್ತರ ಪರೀಕ್ಷೆಯ ವೇಳೆ ವಿದ್ಯಾರ್ಥಿನಿ ಆತ್ಮಹತ್ಯೆಗೂ ಮೊದಲು ಮೈಮೇಲೆ ಗಾಯಗಳಾಗಿವೆ ಅನ್ನೋದು ತಿಳಿದಿದೆ. ವಿದ್ಯಾರ್ಥಿನಿ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಶಿಕ್ಷಕರಿಬ್ಬರ ಹೆಸರು ಉಲ್ಲೇಖಿಸಿದ್ದಾಳೆ.
ಇನ್ನು ಈ ಘಟನೆ ಹಿಂಸಾರೂಪ ಪಡೆದು ಕಾಲೇಜಿನ ಹಲವು ಬಸ್ ಗಳನ್ನು ಸುಟ್ಟು ಹಾಕಿದ್ದು, ಅಪಾರ ಪ್ರಮಾಣದ ಆಸ್ತಿ ಹಾನಿಗೊಳಿಸಲಾಗಿದೆ. ಈ ಸಂಬಂಧ ಹಲವರ ಬಂಧನವಾಗಿದೆ.