ಸೋಷಿಯಲ್ ಮೀಡಿಯಾದಲ್ಲಿ ಎಂಬಿಪಿ ಪ್ರಚಾರದ ಅಬ್ಬರ

130

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ರಾಜಕೀಯ ಪಕ್ಷಗಳ, ನಾಯಕರ ಅಬ್ಬರ ಪ್ರಚಾರ ನಡೆದಿದೆ. ಇದೆ ರೀತಿ ಕಾಂಗ್ರೆಸ್ ಮಾಜಿ ಸಚಿವ, ಹಿರಿಯ ನಾಯಕ, ಆಧುನಿಕ ಭಗೀರಥ ಎಂದು ಜಿಲ್ಲೆಯಲ್ಲಿ ಕರೆಸಿಕೊಳ್ಳುವ ಎಂ.ಬಿ ಪಾಟೀಲರ ಪ್ರಚಾರ ಸಹ ಜೋರಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಆರ್ಭಟಿಸುತ್ತಿದೆ.

ಬಬಲೇಶ್ವರ ಮತಕ್ಷೇತ್ರದ ಶಾಸಕ ಎಂ.ಬಿ ಪಾಟೀಲರ ಪುತ್ರ ರಾಹುಲ್ ಎಂ.ಪಾಟೀಲ ತಂದೆಯ ರಾಜಕೀಯ ಕಾರ್ಯಕ್ಕೆ ಸಾಥ್ ನೀಡಿದ್ದು, ಸಾಮಾಜಿಕ ಜಾಲತಾಣವನ್ನು ನೋಡಿಕೊಳ್ಳುತ್ತಿದ್ದಾರೆ. ತಂದೆ ಮಾಡಿದ ಜನಪರ ಕಾರ್ಯಗಳನ್ನು ಜನರಿಗೆ ಮತ್ತಷ್ಟು ತಿಳಿಸುವ ಮೂಲಕ ಅವರ ಪರ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ನಡೆಸಿ, ಯುವ ಜನತೆಯನ್ನು ಹೆಚ್ಚೆಚ್ಚು ಸೆಳೆಯುತ್ತಿದ್ದಾರೆ.

ನಾನು ಹಲವಾರು ಶಾಸಕರ ಸಾಕ್ಷ್ಯಚಿತ್ರ ಮಾಡಿರುವೆ. ಆದರೆ, ಇವರು ಮಾತ್ರ ಬೇರೆ ಎಲ್ಲೋ ನಿಲ್ಲುತ್ತಾರೆ. ಮೂರು ತಲೆಮಾರಿನ ಜನರಿಗಾಗುವಂತಹ ಕೆಲಸ ಮಾಡಿದ್ದಾರೆ. ಸಾವಿರಾರು ಕುಟುಂಬಗಳು ಆರ್ಥಿಕವಾಗಿ ಸದೃಢವಾಗಿವೆ. ನಾನು ಬಬಲೇಶ್ವರ ಕ್ಷೇತ್ರದಲ್ಲಿ ಓಡಾಡಿದ ಅನುಭವದಿಂದ ಹೇಳುತ್ತಿದ್ದೇನೆ. ನೂತನವಾಗಿ ಆಯ್ಕೆಯಾದ ಶಾಸಕರು ಈ ಕ್ಷೇತ್ರವನ್ನು ಒಮ್ಮೆ ಸುತ್ತಾಡಿ ನೋಡಿ ಕಲಿಯುವಂತಹದ್ದು ಬಹಳಷ್ಟಿದೆ.

ಚಂದ್ರಕಾಂತ ಸೊನ್ನದ, ಸಾಕ್ಷ್ಯ ಚಿತ್ರ ನಿರ್ದೇಶಕರು

ಮಾಹಿತಿ ಹಾಗೂ ಪ್ರಚಾರದ ದೃಷ್ಟಿಯಿಂದ ಡಿಜಿಟಲ್ ಮೀಡಿಯಾ ಇಂದು ತುಂಬಾ ಪವರ್ ಫುಲ್ ಆಗಿದೆ. ಇದರಲ್ಲಿ ಅತೀ ಹೆಚ್ಚು ಯುವ ಜನತೆ ಕಾಣಿಸಿಕೊಳ್ಳುವುದರಿಂದ ಅವರ ಮತಗಳನ್ನು ಮತ್ತಷ್ಟು ಗಟ್ಟಿಗಳಿಸಿಕೊಳ್ಳುವಲ್ಲಿ ಈ ರೀತಿಯ ವಿಡಿಯೋಗಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಅದನ್ನು ರಾಹುಲ್ ಎಂ.ಪಾಟೀಲ ಸೂಕ್ತವಾಗಿ ಬಳಸಿಕೊಂಡು ತಂದೆಯ ಪರ ಪ್ರಚಾರ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!