ಅಲ್ವಾರ್: ಕಾಂಗ್ರೆಸ್ ಮಾಜಿ ಸಂಸದರೊಬ್ಬರ ಪುತ್ರನ ಮೃತದೇಹ ಆಲ್ವಾರ್ ಜಿಲ್ಲೆಯ ಕ್ರಾಸ್ ಪಾಯಿಂಟ್ ಮಾಲ್ ಬಳಿ ಪತ್ತೆಯಾಗಿದೆ. ಮಾಲ್ ಹೊರಗಡೆ ಮಾಜಿ ಸಂಸದ ಘಾಸಿ ರಾಮ ಯಾದವ್ ಅವರ ಮಗನ ಮೃತದೇಹ ಪತ್ತೆಯಾಗಿದೆ.
ಘಾಸಿ ರಾಮ ಯಾದವ ಅವರ ಮಗ ಮಹೇಂದ್ರ ಕುಮಾರ ಯಾದವ ಮೃತಪಟ್ಟಿದ್ದಾರೆ. ಮಾಲ್ ಹೊರಗಡೆಯ ಬೆಂಚ್ ಮೇಲೆ ಮಲಗಿರುವಾಗ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಮಹೇಂದ್ರ ಕುಮಾರ ಕುಡಿದು ಅಲ್ಲಿ ಮಲಗಿದ್ರು ಅಂತಾ ಹೇಳಲಾಗ್ತಿದೆ. ಸ್ಥಳಕ್ಕೆ ಪೊಲೀಸ್ರು ಭೇಟಿ ಕೊಟ್ಟಿದ್ದು ತನಿಖೆ ನಡೆಸ್ತಿದ್ದಾರೆ.