ಪ್ರಜಾಸ್ತ್ರ ಸುದ್ದಿ
ಭೋಪಾಲ್: ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಭರ್ಜರಿಯಾಗಿ ನಡೆಯುತ್ತಿದೆ. ಮಧ್ಯಪ್ರದೇಶದಲ್ಲಿ ಯಾತ್ರೆಯ ಅಬ್ಬರ ಜೋರಾಗಿದೆ. ಇಂದೋರ್ ನಲ್ಲಿ ಯಾತ್ರೆ ಸಾಗುತ್ತಿರುವಾಗ ರಾಹುಲ್ ಗಾಂಧಿ ನೋಡಲು ಅಪಾರ ಸಂಖ್ಯೆಯ ಜನರು ಸೇರಿದ್ದಾರೆ.
ಅಭಿಮಾನಿಗಳು, ಕಾರ್ಯಕರ್ತರು ಅವರನ್ನು ನೋಡಲು ಮಗಿಬಿದ್ದಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಬಿದ್ದು ಕೈಗೆ ಗಾಯವಾಗಿದೆ. ಕೈ ಮೂಳೆ ಫ್ಯಾಕ್ಚರ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಜನರನ್ನು ನಿಯಂತ್ರಿಸುವಲ್ಲಿ ವಿಫಲರಾದ ಪರಿಣಾಮ ಈ ರೀತಿಯಾಗಿದೆ.