ಪ್ರಜಾಸ್ತ್ರ ಸುದ್ದಿ
ಮೈಸೂರು: ಬಿಜೆಪಿಯವರು ಡೋಂಗಿ ಹಿಂದುತ್ವವಾದಿಗಳು. ಬೆಂಗಳೂರಿನ ಕೇಶವಕೃಪಾ, ನಾಗಪುರದ ಹೆಗ್ಡೇವಾರಕೃಪಾದ ಆರ್ ಎಸ್ಎಸ್ ಬಳಿ ರಿಮೋಟ್ ಕಂಟ್ರೋಲ್ ಇದೆ ಎಂದು ಕಾಂಗ್ರೆಸ್ ವಕ್ತಾರ ವಿ.ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದರು. ಬುಧವಾರ ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ಈ ರೀತಿ ಹೇಳಿದರು.
ಬಿಜೆಪಿಯವರು ಸಂವಿಧಾನ ದ್ರೋಹ ಮಾಡುತ್ತಿದ್ದಾರೆ. ಒಂದು ಬದ್ಧತೆಯಿಲ್ಲದ, ಕೇವಲ ಮತಕ್ಕಾಗಿ ಏನು ಬೇಕಾದರು ಮಾಡುವ ಪಕ್ಷ. ಮನುವಾದಿಗಳ ಹಿಂದುತ್ವ ಡೋಂಗಿ. ಗಾಂಧಿವಾದಿಗಳ ಹಿಂದುತ್ವ ನೈಜವಾದದ್ದು ಎಂದರು.
ಇನ್ನು ಕಾಂಗ್ರೆಸ್ ನಲ್ಲಿನ ಗುಂಪುಗಾರಿಕೆ ಬಗ್ಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಭಿನ್ನಾಭಿಪ್ರಾಯ ಇರಬಹುದು. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಯಾರೆ ಇದ್ದರೂ ಪಕ್ಷ ಹೇಳಿದಂತೆ ನಡೆಯಬೇಕು. ಗುಂಪುಗಾರಿಕೆ ಅನ್ನೋದು ಕೆಲ ಮಾಧ್ಯಮಗಳ ಸೃಷ್ಟಿ ಎಂದರು. ಈ ವೇಳೆ ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.