ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಬಿಜೆಪಿ ವತಿಯಿಂದ ಕೋವಿಡ್ ಲಸಿಕೆ ಫಲಾನುಭವಿಗಳ ನೋಂದಣಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತ್ನಾಡಿದ ಮಾಜಿ ಶಾಸಕ ರಮೇಶ ಭೂಸನೂರ, 60 ವರ್ಷ ದಾಟಿದವರು ಹಾಗೂ 45 ರಿಂದ 60 ವರ್ಷದ ಒಳಗಿನ ಡಯಾಬಿಟೀಸ್, ಕ್ಯಾನ್ಸರ್, ಬಿಪಿ ಸೇರಿ ದೀರ್ಘಕಾಲಿಕ ಕಾಯಿಲೆ ಇರುವವರು ಕೂಡ ಯಾವುದೇ ಭಯವಿಲ್ಲದೆ ಉಚಿತವಾಗಿ ಕೋವಿಡ್ ಲಸಿಕೆ ಪಡೆಯಬಹುದು ಎಂದರು.
ಡಾ.ಮಾಂತೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತ್ನಾಡಿ, ಲಸಿಕೆ ಪಡೆಯಲು 6 ತಿಂಗಳ ಕಾಲಾವಕಾಶ ಇದೆ. ಸಾರ್ವಜನಿಕರು ನಿರ್ಭಯವಾಗಿ ಲಸಿಕೆ ಪಡೆಯಬೇಕು ಎಂದರು. ಕಾಂಗ್ರೆಸ್ ಹಿರಿಯ ಮುಖಂಡ ಶರಣಪ್ಪ ವಾರದ ಮಾತ್ನಾಡಿ, ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ನಾನೂ ಸಹ ಲಸಿಕೆ ಪಡೆದಿದ್ದೇನೆ. ಎಲ್ಲರೂ ಉಚಿತ ಲಸಿಕೆ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದರು.
ಈ ವೇಳೆ ಡಾ.ಬಡಗೇರ, ಶ್ರೀಧರ ಕುಲಕರ್ಣಿ, ಸುದರ್ಶನ ಜಂಗಾಣಿ, ಈರಣ್ಣ ರಾವೂರ, ಎಸ್ ಆರ್ ಪಾಟೀಲ, ಮಲ್ಲು ಬಗಲಿ, ಸುನಂದಾ ಯಂಪೂರೆ, ರಾಜು ಬಂಕಲಗಿ, ಶ್ರೀಶೈಲಗೌಡ ಬಿರಾದಾರ ಶೇಖರಗೌಡ ಹರನಾಳ ಸೇರಿ ಅನೇಕರು ಉಪಸ್ಥಿತರಿದ್ದರು.