ನವದೆಹಲಿ: ಸಿಎಎ ವಿರೋಧಿಸಿ ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ಟೈಂನಲ್ಲಿ ಗುಂಡು ಹಾರಿಸಿದ್ದ ಶಾರೂಕ್ ನನ್ನ ಬಂಧಿಸಲಾಗಿದೆ. ಅಲ್ದೇ, ಪೊಲೀಸ್ ಪೇದೆಯೊಬ್ಬರ ಹಣೆಗೆ ಗನ್ ಹಿಡಿದಿದ್ದ. ದೆಹಲಿ ಅಪರಾಧ ದಳದ ಪೊಲೀಸ್ರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಮೌಜ್ ಪುರದಲ್ಲಿ ಫೆಬ್ರವರಿ 24 ರಂದು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಪಿಸ್ತೂಲ್ ಹಿಡಿದು ಪೇದೆ ದೀಪ್ ದಹಿಯಾ ಮೇಲೆ ಫೈರಿಂಗ್ ಮಾಡಿದ್ದ. ಅಲ್ದೇ, 7 ಸುತ್ತು ಗುಂಡು ಹಾರಿಸಿದ್ದ. ಬಳಿಕ ಆತ ಎಸ್ಕೇಪ್ ಆಗಿದ್ದ. ಈ ದೃಶ್ಯ ಸಾಕಷ್ಟು ಸುದ್ದಿಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಉಸ್ಮಾನಪುರದ ಅರವಿಂದ ನಗರದಲ್ಲಿರುವ ಸ್ಟ್ರೀಟ್ ನಂಬರ್ 5ಯು-108 ಮನೆಯಿದೆ. ಘಟನೆ ಬಳಿಕ ಶಾರೂಕ್ ಹಾಗೂ ಆತನ ಕುಟುಂಬಸ್ಥರು ತಲೆ ಮರೆಸಿಕೊಂಡಿದ್ದಾರೆ. ಇದೀಗ ಶಾರೂಕ್ ಬಂಧನವಾಗಿದೆ.