“ದೃಶ್ಯಗಳಲ್ಲಿ ಕೇವಲ ಯಶ್ ಮಾತ್ರ ಕಾಣಲ್ಲ. ಚಿತ್ರದ ಹಿಂದೆ ಕೆಲಸ ಮಾಡಿದ ಪ್ರತಿ ತಂತ್ರಜ್ಞರ ಕ್ಷಮತೆ ನನಗೆ ಕಾಣುತ್ತಿತ್ತು. ಚಿತ್ರತಂಡದಲ್ಲಿ ಕೆಲಸ ಮಾಡಿದ ತಂತ್ರಜ್ಞರ ಪರಿಚಯ ನನಗಿಲ್ಲ. ಆದ್ರೆ ಸಿನಿಮಾದಲ್ಲಿ ಅವರ ಅಚ್ಚುಕಟ್ಟಿನ ಕೆಲಸವೇ ಅವರು ಯಾರು ಎಂಬುದನ್ನು ತೋರಿಸುತ್ತದೆ. ಕೆಜಿಎಫ್ ಎಂಬ ಉತ್ಪನ್ನ ಹೊರಬರಲು ಪ್ರತಿಯೊಬ್ಬರ ಕಠಿಣ ಪರಿಶ್ರಮ ಅಡಕವಾಗಿದೆ. ತೆಲುಗು ಜನರು ಸಿನಿಮಾ ಮಾಡಿದ್ದು ಯಾರು? ಯಾವ ಭಾಷೆ? ಅಂತಾ ನೋಡಲ್ಲ. ಚಿತ್ರದ ಗುಣಮಟ್ಟ ಕಥೆಯನ್ನು ನೋಡುತ್ತಾರೆ. ತೆಲುಗು ಮಾತ್ರವಲ್ಲದೇ ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಅಂತೆಯೇ ಕೆಜಿಎಫ್ ಸಿನಿಮಾ ನೋಡಿ’ ಅಂತ ರಾಜಮೌಳಿ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡರು.