ಸಚಿವ ಭೈರತಿ ಬಸವರಾಜಗೆ ಲೋಕಾಯುಕ್ತರ ನೋಟಿಸ್ ಭೀತಿ!

128

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜಿಲ್ಲೆಗೆ ಬರುವುದೇ ವಸೂಲಿ ಸಲುವಾಗಿ ಅನ್ನೋ ವಿಚಾರವನ್ನು ಪಾಲಿಕೆ ಆಯುಕ್ತರೆ ಹೇಳಿದ್ದಾರೆ ಅನ್ನೋ ಆಡಿಯೋ ಕೆಲ ದಿನಗಳ ಹಿಂದೆ ಭಾರೀ ವೈರಲ್ ಆಗಿತ್ತು. ಪಾಲಿಕೆ ಭ್ರಷ್ಟಾಚಾರದ ಬಗ್ಗೆ ಆಡಿಯೋದಲ್ಲಿ ಮಾತನಾಡಲಾಗಿತ್ತು. ಈಗ ಇದರ ಬಗ್ಗೆ ಲೋಕಾಯುಕ್ತರು ತನಿಖೆ ನಡೆಸುತ್ತಿದ್ದಾರೆ.

ಲೋಕಾಯುಕ್ತರು ಸಚಿವ ಭೈರತಿ ಬಸವರಾಜ್ ಅವರಿಗೆ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಹಾಗೂ ಗುತ್ತಿಗೆದಾರ ಕೃಷ್ಣಪ್ಪ ನಡುವೆ ನಡೆದ ಸಂಭಾಷಣೆ ವೈರಲ್ ಆಗಿತ್ತು. ಅಲ್ಲದೇ 3 ಲಕ್ಷ ಪಡೆಯುವಾಗ ವೆಂಕಟೇಶ್ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿ.

ಇವರಿಬ್ಬರ ಫೋನ್ ಸಂಭಾಷಣೆಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಹಾಗೂ ಸಚಿವ ಭೈರತಿ ಬಸವರಾಜ್ ಹೆಸರು ಪ್ರಸ್ತಾಪವಾಗಿದೆ. ಹೀಗಾಗಿ ಲೋಕಾಯುಕ್ತರು ಸಚಿವರಿಗೆ ನೋಟಿಸ್ ನೀಡುವ ಭೀತಿ ಎದುರಾಗಿದೆ.




Leave a Reply

Your email address will not be published. Required fields are marked *

error: Content is protected !!