ನನ್ನ ಕೊಲೆಗೆ ಸುಪಾರಿ: ಮಾಜಿ ಶಾಸಕ ಸುರೇಶಗೌಡ

130

ಪ್ರಜಾಸ್ತ್ರ ಸುದ್ದಿ

ತುಮಕೂರು: ನನ್ನ ಕೊಲೆಗೆ ಗ್ರಾಮಾಂತರ ಶಾಸಕ ಗೌರಿಶಂಕರ್ ಜೈಲಿನಲ್ಲಿರುವವರಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ಸುರೇಶಗೌಡ ಬಾಂಬ್ ಸಿಡಿಸಿದ್ದಾರೆ. ಅರೆಯೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕ ಗೌರಿಶಂಕರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಕೊಲೆ ಮಾಡಿಸೋದಕ್ಕೆ ಸಜ್ಜಾಗಿದೆಯಾ, ನನ್ನನ್ನು ಕೊಲ್ಲಲು ಜೈಲಿನಲ್ಲಿರುವವರಿಗೆ ಸುಪಾರಿ ಕೊಡ್ತೀಯಾ, ಕೊಲೆ ಅಲ್ಲ ತಾಕತ್ ಇದ್ರೆ ನನ್ನ ಒಂದು ಕೂದಲು ಕಿತ್ತುಕೋ ನೋಡೋಣ ಎಂದು ಸವಾಲು ಹಾಕಿದ್ದಾರೆ. ಮಿಸ್ಟರ್ ಗೌರಿಶಂಕರ ಮತದಾರರು, ನಮ್ಮ ಕಾರ್ಯಕರ್ತರು ನನ್ನ ಒಂದು ಕೂದಲು ಮುಟ್ಟೋಕೆ ಆಗಲ ಎಂದು ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!