ಹುಬ್ಬಳ್ಳಿ: ಸಾಲಬಾಧೆ ತಾಳಲಾರದೆ ರೈತನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುಂದಗೋಳ ತಾಲೂಕಿನ ಕಳಸಾ ಗ್ರಾಮದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳಸಾ ಗ್ರಾಮದ ನಿವಾಸಿ 45 ವರ್ಷದ ಅಖಂಡಪ್ಪ ಹನುಮಂತಪ್ಪ ಅತ್ತಿಗೇರಿ ನೇಣಿಗೆ ಶರಣಾದ ರೈತ. ಮೂರು ನಾಲ್ಕು ವರ್ಷ ಬರಗಾಲ ಬಿದ್ದು ಸರಿಯಾಗಿ ಬೆಳೆ ಬಂದಿರಲಿಲ್ಲ. ಈ ವರ್ಷ ಮೂರು ಎಕರೆ ಹೊಲದಲ್ಲಿ ಬೆಳೆದ ಬೆಳೆಗಳು ಹಾನಿಯಾಗಿವೆ. ಕೆವಿಜಿ ಬ್ಯಾಂಕ್ ನಲ್ಲಿ 2 ಲಕ್ಷ ರೂಪಾಯಿ ಸಾಲವಿತ್ತು. ಊರಲ್ಲಿ ಕೈಗಡ ಕೂಡಾ ಪಡೆದುಕೊಂಡಿದ್ರು. ಸಾಲ ಮರುಪಾವತಿ ಮಾಡಲು ಆಗದ ಕಾರಣ ಮನನೊಂದು ಅಖಂಡಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗುತ್ತಿದೆ. ಈ ಕುರಿತು ಗುಡಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.