ವಿರೋಧದ ನಡುವೆಯೂ ಹಣಕಾಸು ಮಸೂದೆ ಮಂಡನೆ

173

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಅದಾನಿ ಸಂಸ್ಥೆಯ ಅಕ್ರಮದ ಕುರಿತು ಜೆಪಿಸಿ ತನಿಖೆಗೆ ವಿಪಕ್ಷಗಳ ಒತ್ತಾಯದ ನಡುವೆ ವಿತ್ ಸಚಿವೆ ನಿರ್ಮಲಾಸೀತಾರಾಮನ್ ಹಣಕಾಸು ಮಸೂದೆ 2023ನ್ನು ಮಂಡಿಸಿದ್ದಾರೆ. ವಿರೋಧ ಪಕ್ಷದ ಸಂಸದರ ಘೋಷಣೆಯ ಮಧ್ಯೆ ಮಸೂದೆ ಮಂಡಿಸಲಾಗಿದೆ.

ಅದಾನಿ ಸಂಸ್ಥೆಯೊಂದಿಗಿನ ಪ್ರಧಾನಿ ಮೋದಿ ಸಂಬಂಧದ ಕುರಿತು ಸಂಸತ್ ಒಳಗೆ ಹಾಗೂ ಹೊರಗೆ ವಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತಿವೆ. ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಹಣಕಾಸು ಮಸೂದೆ 2023ನ್ನು ಮಂಡಿಸಿದ್ದು, ಅಂಗೀಕಾರ ನೀಡಲಾಗಿದೆ.

ಇನ್ನೊಂದು ಕಡೆ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವ ವಿಚಾರ ಸಹ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬುಡಮೇಲು ಮಾಡಲು ಹೊರಟಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀಕ್ಷಣ ವಾಗ್ದಾಳಿ ನಡೆಸಲಾಗಿದೆ.




Leave a Reply

Your email address will not be published. Required fields are marked *

error: Content is protected !!