ಪ್ರಜಾಸ್ತ್ರ ಸುದ್ದಿ
ವಿಜಯಪುರ: ಆಕಸ್ಮಿಕವಾಗಿ ಬೆಂಕಿ ಅನಾಹುತದಲ್ಲಿ ಗಿಫ್ಟ್ ಅಂಗಡಿಯೊಂದು ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ವಿನೋದ ಬಡಿಗೇರ ಎಂಬುವವರಿಗೆ ಸೇರಿದ ವೈಷ್ಣವಿ ನಾವಲಸ್ಟೀಸ್ ಅನ್ನೋ ಅಂಗಡಿಯಲ್ಲಿ ಬೆಂಕಿ ಅನಾಹುತ ನಡೆದಿದೆ.
ಸೋಮವಾರ ಮಧ್ಯರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಇಷ್ಟೆಲ್ಲ ಅನಾಹುತವಾಗಿದೆ ಎಂದು ತಿಳಿದು ಬಂದಿದೆ. ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿ ಎಂದು ಹೇಳಲಾಗುತ್ತಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸೋಮವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಗಿಫ್ಟ್ ವಸ್ತುಗಳ ಜೊತೆಗೆ ಮಕ್ಕಳ ಬೃಹತ್ ಆಟಿಕೆ ಸಾಮಾನುಗಳು ಸಹ ಇದ್ದು, ಎಲ್ಲವೂ ಸುಟ್ಟು ಹೋಗಿವೆ. ಈ ಕುರಿತು ದೂರು ನೀಡಿದ್ದೇವೆ.
ವಿನೋದ ಬಡಿಗೇರ, ಅಂಗಡಿ ಮಾಲೀಕರು