ಪ್ರಜಾಸ್ತ್ರ ಸುದ್ದಿ
ಕೊಪ್ಪಳ: ನಗರದ ಗಡಿಯಾರ ಕಂಬದ ಹತ್ತಿರದ ಮೂರು ಅಂಗಡಿಗಳಿಗೆ ಬುಧವಾರ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಅಂಗಡಿಯಲ್ಲಿ ಸಾಮಾನುಗಳು ಸುಟ್ಟು ಹೋಗಿವೆ.
ವಿದ್ಯುತ್ ಶಾಕ್ ಸರ್ಕಿಟ್ ನಿಂದ ಬೆಂಕಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಎರಡು ಹೋಟೆಲ್, ಒಂದು ತೆಂಗಿನಕಾಯಿ ವ್ಯಾಪಾರದ ಅಂಗಡಿ ಸುಟ್ಟಿವೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.