ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಧಾರವಾಡ: ಖ್ಯಾತ ಹಿರಿಯ ಜಾನಪದ ಕಲಾವಿದ, ಕಂಚಿನ ಕಂಠದ ಗಾಯಕ ಬಸಲಿಂಗಯ್ಯ ಹಿರೇಮಠ ಭಾನುವಾರ ಬೆಳಗ್ಗೆ ನಿಧನರಾದರು. 63 ವರ್ಷದ ಜಾನಪದ ಗಾಯಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಜಾನಪದ ಪರಂಪರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ರಂಗಭೂಮಿಯಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದ ಪತಿಗೆ ಪತ್ನಿ ವಿಶ್ವೇಶ್ವರಿ ಅವರು ಸಾಥ್ ನೀಡಿದ್ದರು. ಅವರು ಸಹ ಜಾನಪದ ಕಲಾವಿದೆಯಾಗಿದ್ದರು. ಪಾರಿಜಾತ ನಾಟಕ ಬಹುದೊಡ್ಡ ಹೆಸರು ತಂದು ಕೊಟ್ಟಿತು. ಅದನ್ನು ದೇಶ, ವಿದೇಶಗಳಲ್ಲಿ ಪ್ರದರ್ಶನ ನಡೆಸಿದರು.
ಇವರ ಜಾನಪದ ಸೇವೆ ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ, ಪುರಸ್ಕಾರಗಳು ಇವರ ಮುಡಿಗೇರಿವೆ. ಇವರ ನಿಧನಕ್ಕೆ ರಂಗಭೂಮಿ, ಜಾನಪದ ಪರಂಪರೆಯ ಕಲಾವಿದರು, ಒಡನಾಡಿಗಳು, ಶಿಷ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.