‘ಆಧುನಿಕ ಕನ್ನಡ ವಿಮರ್ಶಕ’ನ ಬದುಕು-ಬರಹ

575

ಪ್ರಜಾಸ್ತ್ರ ವಿಶೇಷ

ಖ್ಯಾತ ಸಾಹಿತಿ, ವಿಮರ್ಶಕ ಡಾ.ಜಿ.ಎಸ್.ಆಮೂರ ಸೆಪ್ಟೆಂಬರ್ 28ರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಗುರುರಾಜ ಶ್ಯಾಮಾಚಾರ ಆಮೂರ ಇವರ ಪೂರ್ತಿ ಹೆಸರು.

ಮೇ 8, 1925ರಲ್ಲಿ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಜನಿಸಿದ್ರು. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿಎ ಪದವಿ ಪಡೆದರು. ಮುಂದೆ ಕುಮಟಾ, ಗದಗ ಹಾಗೂ ಔರಂಗಾಬಾದ್ ಕಾಲೇಜುಗಳಲ್ಲಿ ಅಧ್ಯಾಪಕರಾಗಿ 16 ವರ್ಷ ಸೇವೆ ಸಲ್ಲಿಸಿದರು. 14 ವಿದ್ಯಾರ್ಥಿಗಳಿಗೆ ಪಿಎಚ್ ಡಿ ಮಾರ್ಗದರ್ಶನ ಹಾಗೂ 3 ವಿದ್ಯಾರ್ಥಿಗಳಿಗೆ ಎಂಫಿಲ್ ಮಾರ್ಗದರ್ಶನ ಮಾಡಿದ್ದಾರೆ.

ಕಳೆದ ಐದು ದಶಕಗಳಿಂದ ವಿಮರ್ಶಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಡಾ.ಅಮೂರ ಅವರು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ರು. ನಿವೃತ್ತಿ ಜೀವನವನ್ನ ಧಾರವಾಡದಲ್ಲಿ ಕಳೆಯುತ್ತಿದ್ದರು. ಇತ್ತೀಚೆಗಷ್ಟೇ ಬೆಂಗಳೂರಿಗೆ ಹೋಗಿದ್ರು.

ಇವರ ಭುವನದ ಭಾಗ್ಯ ಕೃತಿಗೆ  1996ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಇವರ ಸಾಹಿತ್ಯ ಕೃಷಿ ಇಲ್ಲಿದೆ ನೋಡಿ..

ಆಮೂರರ ಸಾಹಿತ್ಯ ಕೃಷಿ

ಆಧುನಿಕ ಕನ್ನಡ ವಿಮರ್ಶೆ, ಮಹಾಕವಿ ಮಿಲ್ಟನ್, ಕೃತಿಪರೀಕ್ಷೆ, ಅ.ನ.ಕೃಷ್ಣರಾಯ, ಭುವನದ ಭಾಗ್ಯ, ವ್ಯವಸಾಯ, ಅರ್ಥಲೋಕ, ಕನ್ನಡ ಕಥನ ಸಾಹಿತ್ಯ, ಸಾತ್ವಿಕ ಪಥ, ಕಾದಂಬರಿ ಸ್ವರೂಪ, ದ.ರಾ.ಬೇಂದ್ರೆ, ಅಮೃತವಾಹಿನ, ಶಾಂತಿನಾಥ ದೇಸಾಯಿ, ಬೇಂದ್ರೆ ಕಾವ್ಯದ ಪ್ರತಿಮಾಲೋಕ, ಕಥನ ಶಾಸ್ತ್ರ, ಸೀಮೊಲ್ಲಂಘನ, ಸಮಕಾಲೀನ ಕಥೆ ಕಾದಂಬರಿ, ಸಣ್ಣಕತೆ, ಕನ್ನಡ ಕಾದಂಬರಿಯ ಬೆಳವಣಿಗೆ, ಆಧುನಿಕ ಕನ್ನಡ ಸಾಹಿತ್ಯದ ವಿರಾಟಪುರುಷ, ವಿ.ಸೀ ಬೆಲೆಬಾಳುವ ಬರಹಗಳು(ಸಂಪಾದನೆ)..

ಇಂಗ್ಲಿಷ್ ಕೃತಿಗಳು

Adya Rangachar, A Critical spectrum, Images and Impressions, A.N.Krishnarao, The Concept of Comedy, Poetics of T.S.Eliot, Essays on modern Kannada literature

ಹೀಗೆ ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಲೋಕದಲ್ಲಿ ಜಿ.ಎಸ್ ಆಮೂರ ಅವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇವರಿಗೆ ದೊರೆತ ಪ್ರಶಸ್ತಿಗಳು ಹೀಗಿವೆ.

ಆಮೂರರ ಮುಡಿಗೇರಿದ ಪ್ರಶಸ್ತಿಗಳು

ಭುವನದ ಭಾಗ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(196), ಪಂಪ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ (ಕೊಲ್ಕತ್ತಾ), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ, ಅ.ನ.ಕೃ.ಪ್ರಶಸ್ತಿ, ಡಾ.ಬೆಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿ(2016), ನೃಪತುಂಗ ಪ್ರಶಸ್ತಿ(2020) ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರನ್ನ ಹುಡುಕಿಕೊಂಡು ಬಂದಿವೆ.




Leave a Reply

Your email address will not be published. Required fields are marked *

error: Content is protected !!