ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕರ್ನಾಟಕ ರತ್ನ, ಡಾ.ಪುನೀತ್ ರಾಜಕುಮಾರ್ ಎಲ್ಲರನ್ನು ಅಗಲಿ ಒಂದು ವರ್ಷ ಕಳೆದಿದೆ. ಅವರ ಕನಸಿನ ಪ್ರಾಜೆಕ್ಟ್ ಗಂಧದಗುಡಿ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಂದಿನಿಂದ(ನವೆಂಬರ್ 7-10) ನಾಲ್ಕು ದಿನಗಳ ಕಾಲ ಟಿಕೆಟ್ ದರ ಇಳಿಕೆ ಮಾಡಲಾಗಿದೆ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಹೇಳಿದ್ದಾರೆ.
ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ತೋರಿಸುವ ಹಂಬಲ ಅಪ್ಪು ಅವರಿಗಿತ್ತು. ಅಲ್ಲದೆ, ಮಕ್ಕಳು ನೋಡಬೇಕು ಅನ್ನೋ ಬಯಕೆ ಇತ್ತು. ಹೀಗಾಗಿ ನಾಲ್ಕು ದಿನಗಳ ಕಾಲ ಟಿಕೆಟ್ ದರ ಇಳಿಕೆ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸಿಂಗಲ್ ಸ್ಕ್ರೀನ್ ಗಳಲ್ಲಿ 56 ರೂಪಾಯಿ ಹಾಗೂ ಮೆಲ್ಟಿಫ್ಲೆಕ್ಸ್ ಗಳಲ್ಲಿ 112 ರೂಪಾಯಿಗೆ ಟಿಕೆಟ್ ಅನ್ನು ಕರ್ನಾಟಕದಾದ್ಯಂತ ನೀಡಲಾಗುತ್ತೆ ಎಂದಿದ್ದಾರೆ. ಗಂಧದಗುಡಿ ನೋಡಿದ ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿಗಳನ್ನು ಥಿಯೇಟರ್ ಗಳತ್ತ ಕರೆದುಕೊಂಡು ಬರಲಾಗುತ್ತಿದೆ.