ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಪವರ್ ಸ್ಟಾರ್, ದಿವಂಗತ ಡಾ.ಪುನೀತ್ ರಾಜಕುಮಾರ್ ಅವರ ಗಂಧದಗುಡಿ ಚಿತ್ರ ನೋಡಿದ ಪ್ರತಿಯೊಬ್ಬರ ಕಣ್ಣುಗಳು ತುಂಬಿಕೊಂಡು ಬಂದಿವೆ. ಅಪ್ಪು ನಮ್ಮ ಜೊತೆಗೆ ಇಲ್ಲ ಎಂದು ನಂಬಲು ಸಾಧ್ಯವೇ ಇಲ್ಲವೆಂದು ಹೇಳುತ್ತಿದ್ದಾರೆ. ಚಿತ್ರ ನೋಡಿ ಹೊರ ಬರುವ ಪ್ರತಿಯೊಬ್ಬರ ಎದೆಭಾರವಾಗುತ್ತಿದೆ.
ಗಂಧದಗುಡಿ ಬರೀ ಚಿತ್ರವಲ್ಲ. ಅದೊಂದು ಅನುಭವ. ಅಪ್ಪು ಹೇಳುವ ಡೈಲಾಗ್ ಪ್ರತಿಯೊಬ್ಬರಲ್ಲಿಯೂ ಕಣ್ಣೀರು ತರಿಸುತ್ತದೆ. ‘’ನಿಮ್ಮನ್ನು ನಂಬಿಕೊಂಡು ಕಾಡಿಗೆ ಬಂದಿದ್ದೀನಿ. ಮೂರು ಸಿನಿಮಾ ಬೇರೆ ಒಪ್ಪಿಕೊಂಡಿದ್ದೀನಿ. ಮನೇಲಿ ಹೆಂಡ್ತಿ, ಮಕ್ಕಳು ಇದ್ದಾರೆ’’ ಎಂದು ಅಪ್ಪು ಹೇಳಿದಾಗ ಯಾರ ಹೃದಯ ತಾನೆ ಮಿಡಿಯುವುದಿಲ್ಲ ಹೇಳಿ. ಸುಮಾರು ಒಂದೂವರೆ ಗಂಟೆಗಳ ಸಿನಿಮಾ ನೋಡುಗರನ್ನು ಕಾಡಿನೊಳಗೆ ಕರೆದುಕೊಂಡು ಹೋಗುತ್ತದೆ.