ನಾಳೆ ಗಂಧದಗುಡಿ ಥಿಯೇಟರ್ ಗೆ ಎಂಟ್ರಿ

218

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಎಲ್ಲರ ನೆಚ್ಚಿನ ನಟ, ಆರಾಧ್ಯ ದೈವ ಆಗಿರುವ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಗಂಧದಗುಡಿ ನಾಳೆ ರಿಲೀಸ್ ಆಗುತ್ತಿದೆ. ಈಗಾಗ್ಲೇ ಪ್ರಿ ರಿಲೀಸ್ ಈವೆಂಟ್ ಮೂಲಕ ಅಪ್ಪುಗೆ ಭಾರತೀಯ ಚಿತ್ರರಂಗದ ಗಣ್ಯರು ನಮನ ಸಲ್ಲಿಸಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋ ನಡೆದಿದ್ದು, ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಎಲ್ಲವೂ ಸೋಲ್ಡ್ ಔಟ್ ಆಗುವುದರೊಂದಿಗೆ ದಾಖಲೆ ಬರೆಯಲಾಗಿದೆ. ಚಿತ್ರರಂಗದವರು ಮಾತ್ರವಲ್ಲ ಕ್ರಿಕೆಟ್ ತಾರೆಗಳು ಸಹ ಗಂಧದಗುಡಿ ನೋಡಿ ಎಂದು ಶುಭ ಹಾರೈಸಿದ್ದಾರೆ.

ಭಾರತ ಕ್ರಿಕೆಟ್ ತಂಡ ಬೌಲರ್ ಅಮಿತ್ ಮಿಶ್ರಾ, ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರು ಗಂಧದಗುಡಿ ಚಿತ್ರ ನೋಡಿ ಎಂದು ಮನವಿ ಮಾಡಿದ್ದಾರೆ. ನಾಳೆ ಎಲ್ಲೆಡೆ ಗಂಧದಗುಡಿ ಹವಾ ಶುರುವಾಗಲಿದೆ.




Leave a Reply

Your email address will not be published. Required fields are marked *

error: Content is protected !!