ಪ್ರಜಾಸ್ತ್ರ ಅಪರಾಧ ಸುದ್ದಿ
ಲಖನೌ: ವಕೀಲರ ವೇಷದಲ್ಲಿ ಬಂದು ಗ್ಯಾಂಗ್ ಸ್ಟರ್ ಸಂಜೀವ್ ಜೀವಾ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಿವಿಲ್ ಕೋರ್ಟ್ ನಲ್ಲಿ ವಕೀಲರ ವೇಷದಲ್ಲಿ ಬಂದ ದುಷ್ಕರ್ಮಿಗಳು ಪಾತಕಿ ಮುಕ್ತಾರ್ ಅನ್ಸಾರಿ ಆಪ್ತ, ಗ್ಯಾಂಗ್ ಸ್ಟರ್ ಸಂಜೀವ್ ಜೀವಾನನ್ನು ಕೊಲೆ ಮಾಡಲಾಗಿದೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದ. ಕೋರ್ಟಿಗೆ ಬಂದಿದ್ದ ಸಂದರ್ಭದಲ್ಲಿ ಹಾಡಹಗಲೇ ಆತನ ಮೇಲೆ ಗುಂಡಿನ ದಾಳಿಗೈದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ ಓರ್ವ ಬಾಲಕಿ ಹಾಗೂ ಪೊಲೀಸರೊಬ್ಬರು ಗಾಯಗೊಂಡಿದ್ದಾರೆ.