ಬಾಯ್ ಫ್ರೆಂಡ್ ಗಾಗಿ ದುಬೈನಿಂದ ಬಂದು ಮೃತಪಟ್ಟ ಯುವತಿ: ಯುವಕನ ಬಂಧನ

130

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದ ಅಪಾರ್ಟ್ ಮೆಂಟ್ ವೊಂದರಿಂದ ಯುವತಿಯೊಬ್ಬಳು ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕಳೆದ ಶನಿವಾರ ನಡೆದಿತ್ತು. ಈ ಪ್ರಕರಣ ಸಂಬಂಧ ಯುವತಿ ಬಾಯ್ ಫ್ರೆಂಡ್ ನನ್ನು ಪೊಲೀಸರು ಕೊಲೆ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಅರ್ಚನಾ ಧಿಮಾನ್ ಅನ್ನೋ ಯುವತಿ ದುಬೈನಲ್ಲಿ ಗಗನಸಖಿ ಆಗಿ ಕೆಲಸ ನಿರ್ವಹಿಸುತ್ತಿದ್ದಳು. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆದೇಶ್ ಜೊತೆಗೆ ಡೇಟಿಂಗ್ ಆಪ್ ಮೂಲಕ ಸಂಪರ್ಕ ಹೊಂದಿದ್ದರು. ಸುಮಾರು 6 ತಿಂಗಳಿಂದ ಸಂಪರ್ಕದಲ್ಲಿದ್ದರಂತೆ. ಒಮ್ಮೆ ಬೆಂಗಳೂರಿಗೆ ಬಂದು ಹೋಗಿದ್ದಳಂತೆ.

ಇದೇ ರೀತಿ ನಾಲ್ಕು ದಿನಗಳ ಹಿಂದೆ ಅರ್ಚನಾ ಬೆಂಗಳೂರಿಗೆ ಬಂದಿದ್ದಾಳೆ. ಕೋರಮಂಗಲದಲ್ಲಿರುವ ರೇಣುಕಾ ರೆಸಿಡೆನ್ಸಿ ಸೊಸೈಟಿಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಆದೇಶ್ ಜೊತೆಗೆ ಇದ್ದಾಗ ಇಬ್ಬರು ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ಜಗಳ ನಡೆದಿದೆ. ಅರ್ಚನಾ ಬಾಲ್ಕನಿಯಿಂದ ಜಾರಿ ಬಿದ್ದಳು ಎಂದು ಆದೇಶ್ ಹೇಳುತ್ತಿದ್ದಾನೆ.

ಯುವತಿಯ ಸಾವಿನಲ್ಲಿ ಬಾಯ್ ಫ್ರೆಂಡ್ ಕೈವಾಡವಿದೆ ಎಂದು ಶಂಕಿಸಿ ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಅರ್ಚನಾ ಮರಣೋತ್ತರ ವರದಿ ಬಳಿಕ ಮುಂದಿನ ಕ್ರಮಗಳನ್ನು ಪೊಲೀಸರು ಕೈಗೊಳ್ಳಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!