ಪ್ರಜಾಸ್ತ್ರ ಸುದ್ದಿ
ಮೈಸೂರು: ಆಷಾಢ ಮಾಸ ಅನ್ನೋ ಕಾರಣಕ್ಕೆ ತವರ ಮನೆಗೆ ಬಂದಿದ್ದ ನವ ವಧು ದುರಂತ ಅಂತ್ಯ ಕಂಡಿರುವ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. 20 ವರ್ಷದ ವರ್ಷಿತಾ ತಾತನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನವ ವಧು ಆತ್ಮಹತ್ಯೆ ಹಿಂದೆ ಪ್ರೇಮ ಕಹಾನಿ ಇದೆ. ಚಾಮರಾಜನಗರ ಮೂಲದ ಯುವಕನೊಂದಿಗೆ ಕಳೆದ ಮೇ 8ರಂದು ವರ್ಷಿತಾಳ ಮದುವೆ ನಡೆದಿದೆ. ಆಷಾಢ ಮಾಸವೆಂದು ತವರು ಮನೆಗೆ ಬಂದಾಗ ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ನಂತರ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಳು.
ಈ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಬೆಂಗಳೂರಿನಲ್ಲಿ ಪತ್ತೆಯಾದ ಇಬ್ಬರನ್ನು ಕರೆದುಕೊಂಡು ಬಂದು ಬುದ್ದಿ ಮಾತು ಹೇಳಲಾಗಿತ್ತು. ನಂತರ ವರ್ಷಿತಾಳನ್ನು ತಾತನ ಮನೆಗೆ ಕಳುಹಿಸಿ ಕೊಡಲಾಗಿತ್ತು. ಆದರೆ, ಕೊನೆಗೂ ಯುವತಿ ಸಾವಿನ ದಾರಿ ಹಿಡಿದಿದ್ದಾಳೆ.