ಸಚಿವರ ಭ್ರಷ್ಟಾಚಾರ: ಸಂಪುಟದಿಂದ ಕೈ ಬಿಟ್ಟ ಸಿಎಂ ಮಾನ್

210

ಪ್ರಜಾಸ್ತ್ರ ಸುದ್ದಿ

ಚಂಡೀಗಡ: ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಶೇಕಡ 1ರಷ್ಟು ಕಮಿಷನ್ ಗೆ ಬೇಡಿಕೆ ಇಟ್ಟದ್ದ ಆರೋಗ್ಯ ಸಚಿವ ಡಾ.ವಿಜಯ್ ಸಿಂಗಲಾ ಅವರನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಂಪುಟದಿಂದ ಕೈ ಬಿಟ್ಟಿದ್ದಾರೆ. ಅಲ್ದೇ, ಪಂಜಾಬ್ ಪೊಲೀಸ್ ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಡಾ.ವಿಜಯ್ ಸಿಂಗಲಾ ಅವರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಪಂಜಾಬ್ ಸರ್ಕಾರದ ಅಧಿಕೃತ ಟ್ವೀಟರ್ ನಲ್ಲಿ ತಿಳಿಸಲಾಗಿದೆ. ತಮ್ಮದೆ ಪಕ್ಷದ ಶಾಸಕರಾಗಿ, ಸಚಿವರಾಗಿ ಭ್ರಷ್ಟಾಚಾರ ನಡೆಸಿದರೂ ಸಹಿಸುವುದಿಲ್ಲವೆಂದು ಸಿಎಂ ಭಗವಂತ್ ಮಾನ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಸಿಎಂ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ನಿಮ್ಮ ಬಗ್ಗೆ ಹೆಮ್ಮೆ ಇದೆ ಭಗವಂತ್. ನಿಮ್ಮ ಕ್ರಿಯೆ ನನ್ನಲ್ಲಿ ಕಣ್ಣೀರು ತರಿಸಿದೆ. ಆಪ್ ಬಗ್ಗೆ ಇಡೀ ರಾಷ್ಟ್ರ ಹೆಮ್ಮೆ ಪಡುತ್ತೆ ಎಂದಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!