ಬೆಳಗಾವಿ: ಸರ್ಕಾರ ವಿಸರ್ಜನೆ ಮಾಡಿ ಅಂತಾ ಬಸವರಾಜ ಹೊರಟ್ಟಿ ಹೇಳಿದ್ರೆ ನಡೆಯಲ್ಲ ಅಂತಾ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಹೊರಟ್ಟಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವರು, ಬಸವರಾಜ ಹೊರಟ್ಟಿ ಹೇಳಿದರೂ, ಬೇರೆಯವರು ಹೇಳಿದರೂ ಲೆಕ್ಕಕ್ಕೆ ಬರಲ್ಲ. ಹೈಕಾಂಡ್ ನಲ್ಲಿ ಹೇಳಿದ್ರೆ ಅದೊಂದು ಮಾತು ಅಂತಾ ಬೆಳಗಾವಿಯಲ್ಲಿ ಹೇಳಿದ್ದಾರೆ.
ಹೊರಟ್ಟಿ ಹೇಳಿದ್ರು ಅಂತಾ ಸರ್ಕಾರ ವಿಸರ್ಜನೆ ಮಾಡಲು ಆಗೋದಿಲ್ಲ. ದೇವೇಗೌಡರು, ಕುಮಾರಸ್ವಾಮಿ ಹೇಳಿದ್ರೆ ಅದಕ್ಕೊಂದು ಮಹತ್ವ ಇರುತ್ತೆ. ಇದು ಹೊರಟ್ಟಿಯವರ ವೈಯಕ್ತಿಕ ವಿಚಾರ. ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆಯಾಗಲ್ಲ ಅಂತಾ ಸಚಿವ ಸತೀಶ್ ಜಾರಿಕಿಹೊಳಿ ಹೇಳಿದ್ದಾರೆ.