ಪ್ರಜಾಸ್ತ್ರ ಸುದ್ದಿ
ವಿಜಯಪುರ: ಹಳ್ಳದಾಟಲು ರೈತರ ಪ್ರಾಣವೆ ಪಣಕ್ಕೆ ಇಟ್ಟಿರುವ ಪರಿಸ್ಥಿತಿ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹುಣಸ್ಯಾಳ ಗ್ರಾಮ ಹಾಗೂ ಯಲಗೂಡು ಗ್ರಾಮದ ನಡುವೆ ಇರುವ ಹರಿಯುವ ಹಳ್ಳದಲ್ಲಿ ನಡೆದಿದೆ.
ಇನ್ನು ಹಳ್ಳದಾಟಲು ಹಗ್ಗ ಹಿಡಿದು ರೈತರು ಸಾಹಸ ಮಾಡಿದ್ದಾರೆ. ನಿನ್ನೆ ಸುರಿದ ಭಾರೀ ಮಳೆಗೆ ತುಂಬಿ ಕಾಡಪ್ಪನಹಳ್ಳ ತುಂಬಿ ಹರಿಯುತ್ತಿದ್ದು, ಈ ಹಳ್ಳದಲ್ಲಿ ಪ್ರಾಣವನ್ನೆ ಪಣವಾಗಿಟ್ಟು 10ಕ್ಕೂ ಅಧಿಕ ರೈತರು ಹಳ್ಳದಾಟಿದ್ದಾರೆ. ಆದ್ರೇ, ಈ ಹಳ್ಳದಲ್ಲಿ ಹೆಚ್ಚು ಕಡಿಮೆ ಆಗಿದ್ರೇ ರೈತರ ಪ್ರಾಣಕ್ಕೆ ಹೆಚ್ಚು ಕಡಿಮೆ ಆಗುತ್ತಿತ್ತು. ಈ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ.