ಪ್ರಜಾಸ್ತ್ರ ಅಪರಾಧ ಸುದ್ದಿ
ಬೆಂಗಳೂರು: ಪತಿಯನ್ನು ಕೊಂದ ಪತ್ನಿ ಹಾಗೂ ಪ್ರಿಕರನನ್ನು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ದೇಬಿತಂಬಾಗ್ ಹಾಗೂ ಪ್ರಿಯಕರ ಬಾಬು ಅಲಿ ಬಂಧಿತ ಆರೋಪಿಗಳು.
ನೇಪಾಳ ಮೂಲ ರಾಕೇಶ್ ತೋಮಂಗ್, ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದ. ಹೀಗಾಗಿ ಪತ್ನಿ ದೇಬಿತಂಬಾಗ್ ಮತ್ತು ಪ್ರಿಕಯರ ಬಾಬು ಅಲಿ ಸೇರಿಕೊಂಡು ಕಳೆದ ನವೆಂಬರ್ 6ರಂದು ಹತ್ಯೆ ಮಾಡಿದ್ದರು. ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.