ಹುಬ್ಬಳ್ಳಿ : ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಸಚಿವ ಡಿ.ಕೆ ಶಿವಕುಮಾರ್ ಓಪನ್ ಚಾಲೇಂಜ್ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತ್ನಾಡಿದ ಅವರು, ಪದೆಪದೆ ಸರ್ಕಾರ ರಚನೆ ಮಾಡುತ್ತೇನೆ ಅಂತಾ ಬಿಎಸ್ ವೈ ಹೇಳುತ್ತಾರೆ. ನಾನು ಅವರಿಗೆ ಬಹಿರಂಗ ಚರ್ಚೆಗೆ ಬನ್ನಿ ಅಂತಾ ಓಪನ್ ಚಾಲೇಂಜ್ ಮಾಡುತ್ತೇನೆ. ಜಗದೀಶ್ ಶೆಟ್ಟರ್, ಯಡಿಯೂರಪ್ಪ ಮತ್ತು ನನಗೆ ಡಿಬೇಟ್ ಮಾಡಿಸಿ ನಾನು ಸಿದ್ಧ ಅಂತಾ ಹೇಳಿದ್ರು.
ಹುಬ್ಬಳ್ಳಿಯಲ್ಲಿ ನಾನು ಎಲ್ಲಿ ಬೇಕಾದರೂ ಮಾತ್ನಾಡುತ್ತೇನೆ. ನನಗೆ ಯಾವುದೇ ದಾಖಲೆಗಳು ಬೇಕಿಲ್ಲ. ನನ್ನ ಅನುಭವ ಸಾಕು ಅಂತಾ ಹೇಳಿದರು. ಕುಂದಗೋಳ ಕ್ಷೇತ್ರದಲ್ಲಿ ನಡೆಯುತ್ತಿರುವದು ಧರ್ಮಯುದ್ದ. ಈ ಡಿ.ಕೆ.ಶಿವಕುಮಾರ್ ಕೊಟ್ಟ ಮಾತು ತಪ್ಲಿಲ್ಲ. ಬಳ್ಳಾರಿಯಲ್ಲಿ ಏನೂ ಮಾತು ಕೊಟ್ಟಿದ್ದೇನೆ, ನಾನು ಅದನ್ನ ಉಳಿಸಿಕೊಂಡಿದ್ದೇನೆ. ‘ರಿಪಬ್ಲಿಕ್ ಆಫರ್ ಬಳ್ಳಾರಿ’ ತೆಗೆದು ಸಾಮಾನ್ಯ ಜನರ ಆಡಳಿತ ತಂದಿದ್ದೇನೆ ಅಂತಾ ಹೇಳಿದರು